ನಿರ್ಮಾಣ ಹಂತದ ಕಟ್ಟದಿಂದ ಬಂದ ಆ್ಯಸಿಡ್ ಮಿಶ್ರಿತ ನೀರು ಸೇರಿದ ಪರಿಣಾಮ ಕಾವೇರಿ ನದಿಯಲ್ಲಿ ನೊರೆ ಕಂಡುಬಂದಿದೆ. ಕೊಡಗು ಜಿಲ್ಲೆಯ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರೆಸಾರ್ಟ್ ಮತ್ತು ಹೋಟೆಲ್ಗಳಿಂದಲೂ ನದಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದೆ. ಗುಡ್ಡೆ ಹೊಸೂರು, ಮಾದಾಪಟ್ಟಣ ವ್ಯಾಪ್ತಿಯಲ್ಲಿ ನದಿ ಕಲುಷಿತಗೊಂಡಿದ್ದು, ಸಾರ್ವಜನಿಕರ ದೂರಿಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.