ಹಾಸನದಲ್ಲಿ ಶಾಸಕ ಹೆಚ್ಡಿ ರೇವಣ್ಣ ಅವರು ಆಂಜನೇಯ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಕಣ್ಣೀರಿಡುತ್ತಲೇ ಸೇಡಿನ ಶಪಥ ಮಾಡಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದು ಹೇಳಿದ ರೇವಣ್ಣ, ಬಡ್ಡಿ ಸಮೇತ ತೀರಿಸುವವರೆಗೂ ರಾಜಕೀಯದಲ್ಲಿ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದರು. ಕಾರ್ಯಕರ್ತರಿಗೆ ನೋವು ತಾಳಿಕೊಳ್ಳಲು ಸೂಚಿಸಿ, ಬಡ್ಡಿ ಸಮೇತ ತೀರಿಸದೇ ಹೋದರೆ ನನ್ನನ್ನು ರೇವಣ್ಣ ಎನ್ನಬೇಡಿ ಎಂದು ಸವಾಲೆಸೆದರು.