ಚಾಮರಾಜನಗರ ತಾಲೂಕಿನ ಕೆ.ಗುಡಿಯ ಅರಣ್ಯ ಪ್ರದೇಶದಲ್ಲಿ ಬಿಸಿಲ ಬೇಗೆ ತಾಳಲಾರದೆ ಕಾಡಾನೆಯೊಂದು ಮಣ್ಣಿನ ಮಜ್ಜನ ಮಾಡುತ್ತಿರುವ ವಿಡಿಯೋ ಕೆ.ಗುಡಿಯ ಜಂಗಲ್ ಲಾಡ್ಜ್ ಸ್ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಇದನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಆನೆಗಳು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮತ್ತು ಮೈ ತಂಪಾಗಿರಿಸಿಕೊಳ್ಳಲು ಕೆಸರಿನ ಅಥವಾ ಮಣ್ಣಿನ ಮೊರೆ ಹೋಗುವುದು ಸಾಮಾನ್ಯವಾಗಿದೆ. ಸದ್ಯ ಆನೆಯ ಮಣ್ಣಿನ ಮಜ್ಜನ ವಿಡಿಯೋ ವೈರಲ್ ಆಗುತ್ತಿದೆ.