ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಪೂರ್ತಿದಾಯಕ ಮಾತುಗಳು

ಇಂದು(ಜು.27) ಭಾರತದ ಮಾಜಿ ರಾಷ್ಟ್ರಪತಿ, ಅದ್ಭುತ ವಿಜ್ಞಾನಿ ಡಾ. ಎ ಪಿ ಜೆ ಅಬ್ಧುಲ್ ಕಲಾಂ ಅವರ ಪುಣ್ಯ ತಿಥಿ. 

ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಪೂರ್ತಿದಾಯಕ ನುಡಿಗಳು ಇಲ್ಲಿವೆ. 

ಗುರಿಯಿಟ್ಟು ಮುನ್ನಡೆ, ಯಶಸ್ಸು ಖಂಡಿತಾ ನಿನ್ನದಾಗುತ್ತದೆ. 

ನಿದ್ದೆ ಮಾಡುವಾಗ ಕಾಣುವುದು ಕನಸಲ್ಲ, ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೇ ಅದೇ ನಿಜವಾದ ಕನಸು. 

ಸಮಸ್ಯೆಗೆ ನಿಮ್ಮನ್ನು ಸೋಲಿಸುವ ಅವಕಾಶ ಯಾವತ್ತೂ ಕೊಡಬೇಡಿ.

ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈ. ಬೇರೆಯವರಿಗಿಂತ ವಿಭಿನ್ನವಾಗಿ ಯೋಚಿಸಿ.  

ಮೊದಲು ನಿನ್ನ ಮೇಲೆ ನೀನು ನಂಬುವುದನ್ನು ರೂಢಿಸಿಕೋ. ಇದೇ ಯಶಸ್ಸಿನ ಮೊದಲ ಹಾದಿ.

ನಿಮ್ಮ ಕೊನೆಯ ತಪ್ಪು, ನಿಮಗೆ ಉತ್ತಮ ಶಿಕ್ಷಕನಿದ್ದಂತೆ.