ಬೃಹತ್ ಹಾರದಿಂದ ಮೈಸೂರ್ ಪಾಕ್ ಕಿತ್ತು ಸವಿದ

ಸಿದ್ದು ಮತ್ತು ಡಿಕೆಶಿ

ಮೈಸೂರು ಜಿಲ್ಲೆಯ ದೇವರಾಜ ಮೊಹಲ್ಲಾದ ಜೆ.ಕೆ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶ ನಡೆಯಿತು. ಸಿದ್ದರಾಮಯ್ಯಗೆ ಅಭಿಮಾನಿಗಳು ಬೃಹತ್ ಮೈಸೂರು ಪಾಕ್ ಹಾರ ಹಾಕಿದರು.

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ಭಾಗಿಯಾದರು.

ಸಿದ್ದರಾಮಯ್ಯರಿಗಾಗಿ ಅಭಿಮಾನಿಗಳು 750ಕೆಜಿ ತೂಕದ ಮೈಸೂರು ಪಾಕ್ ಸಿದ್ದಪಡಿಸಿದರು ಮತ್ತು ತಮ್ಮ ನೆಚ್ಚಿನ ನಾಯಕನಿಗೆ ಹಾರ ಹಾಕಿದರು.

ಸಿದ್ದರಾಮಯ್ಯ ಅಭಿಮಾನಿ ಜೈಸ್ವಾಮಿ ಎಂಬುವರಿಂದ ಹಾರ ಸಮರ್ಪಣೆ ಮಾಡಲಾಯಿತು.

ಪ್ರಜಾಧ್ವನಿ ಬಸ್‌ ಬಾಗಿಲಲ್ಲಿ ನಿಂತು ಹಾರ ಹಾಕಿಸಿಕೊಂಡ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ಅದರಿಂದ ಮೈಸೂರ್ ಪಾಕ್ ಕಿತ್ತು ಸವಿದರು.

ಕೊನೆಯಲ್ಲಿ, ಮೈಸೂರ್ ಪಾಕ್ ಬೃಹತ್ ಹಾರ  ಕಾರ್ಯಕರ್ತರು, ಅಭಿಮಾನಿಗಳ ಮೇಲೆ ಬಿದ್ದಿದ್ದು, ಎಲ್ಲರೂ ಮುಗಿಬಿದ್ದ ಮೈಸೂರ್ ಪಾಕ್ ಸವಿದರು.