ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ, ಕಾರಣವೇನು?

19 DEC 2023

Author : Manjunatha

ನಟ ನಾಗಾರ್ಜುನ ಸಿನಿಮಾಗಳ ಜೊತೆಗೆ ಬಿಗ್​ಬಾಸ್ ಸಹ ನಿರೂಪಣೆ ಮಾಡುತ್ತಾ ಬಂದಿದ್ದಾರೆ.

ಬಿಗ್​ಬಾಸ್ ನಿರೂಪಣೆ

ಇತ್ತೀಚೆಗಷ್ಟೆ ತೆಲುಗು ಬಿಗ್​ಬಾಸ್ ಸೀಸನ್ 7ರ ನಿರೂಪಣೆಯನ್ನು ನಾಗಾರ್ಜುನ ಮಾಡಿದ್ದಾರೆ. ಇದೇ ಈಗ ಅವರನ್ನು ಸಂಕಷ್ಟಕ್ಕೆ ತಳ್ಳಿದಂತಿದೆ.

ತೆಲುಗು ಬಿಗ್​ಬಾಸ್ 7

ಬಿಗ್​ಬಾಸ್ ತೆಲುಗು 7 ರಲ್ಲಿ ಯುವ ರೈತ ಪಲ್ಲವಿ ಪ್ರಶಾಂತ್ ಅವರನ್ನು ವಿನ್ನರ್ ಎಂದು ಘೋಷಿಸಲಾಗಿದೆ.

ರೈತ ಪಲ್ಲವಿ ಪ್ರಶಾಂತ್

ಪಲ್ಲವಿ ಪ್ರಶಾಂತ್ ಅಭಿಮಾನಿಗಳು ಅನ್ನಪೂರ್ಣ ಸ್ಟುಡಿಯೋ ಹೊರಗೆ ಪುಂಡಾಟ ನಡೆಸಿದ್ದು, ಇತರೆ ಬಿಗ್​ಬಾಸ್ ಸ್ಪರ್ಧಿಗಳ ಕಾರುಗಳನ್ನು ಜಖಂ ಮಾಡಿದ್ದಾರೆ.

ಅಭಿಮಾನಿಗಳ ಪುಂಡಾಟ

ಪಲ್ಲವಿ ಪ್ರಶಾಂತ್ ಮೆರವಣಗೆ ವೇಳೆ ಗದ್ದಲ ಮಾಡಿದ್ದು, ಆರು ಸರ್ಕಾರಿ ಬಸ್ಸುಗಳಿಗೂ ಕಲ್ಲು ತೂರಿದ್ದಾರೆ ಈ ವೇಳೆ ಲಾಠಿ ಚಾರ್ಜ್ ಸಹ ನಡೆದಿದೆ.

ಮೆರವಣಗೆ ವೇಳೆ ಗದ್ದಲ

ಪಲ್ಲವಿ ಪ್ರಶಾಂತ್​ ಅಭಿಮಾನಿಗಳ ಪುಂಡಾಟವನ್ನು ನೆಟ್ಟಿಗರು ಧಿಕ್ಕರಿಸಿದ್ದು, ಪಲ್ಲವಿ ಪ್ರಶಾಂತ್ ವಿರುದ್ಧ ಹಾಗೂ ಬಿಗ್​ಬಾಸ್ ಆಯೋಜಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ದೂರು ದಾಖಲಾಗಿವೆ

ಬಿಗ್​ಬಾಸ್ ನಿರೂಪಕರಾಗಿರುವ ನಟ ಅಕ್ಕಿನೇನಿ ನಾಗಾರ್ಜುನ ಅವರನ್ನೂ ಸಹ ಬಂಧಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ಬಿಗ್​ಬಾಸ್ ಫಿನಾಲೆ ದಿನ ನಡೆದ ಗದ್ದಲ, ಗಲಾಟೆಗಳ ಬಗ್ಗೆ ನಾಗಾರ್ಜುನ ಈ ವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಹೇಳಿಕೆ ನೀಡಿಲ್ಲ

ತೆಲುಗು ಬಿಗ್​ಬಾಸ್ ಗೆದ್ದ ಪಲ್ಲವಿ ಪ್ರಶಾಂತ್ ಯಾರು? ಆತನ ಹಿನ್ನೆಲೆ ಏನು?