ತೆಲುಗು ಬಿಗ್​ಬಾಸ್ ಗೆದ್ದ ಪಲ್ಲವಿ ಪ್ರಶಾಂತ್ ಯಾರು? ಯಾಕೆ ಜನರಿಗೆ ಆತನೆಂದರೆ ಅಭಿಮಾನ?

19 DEC 2023

Author : Manjunatha

ತೆಲುಗು ಬಿಗ್​ಬಾಸ್ ಸೀಸನ್ 7 ಶನಿವಾರವಷ್ಟೆ ಮುಗಿದಿದೆ. ಪಲ್ಲವಿ ಪ್ರಶಾಂತ್ ಈ ಬಾರಿ ವಿಜೇತರಾಗಿದ್ದಾರೆ.

ಬಿಗ್​ಬಾಸ್ ವಿನ್ನರ್

ಈ ಬಾರಿಯ ತೆಲುಗು ಬಿಗ್​ಬಾಸ್​ ಈ ವರೆಗಿನ ಬಿಗ್​ಬಾಸ್​ ಸೀಸನ್​ಗಳಲ್ಲಿಯೇ ಅತ್ಯುತ್ತಮ ಎಂದು ನಾಗಾರ್ಜುನ ಹೇಳಿದ್ದಾರೆ, ಅದಕ್ಕೆ ಕಾರಣ ಪಲ್ಲವಿ ಪ್ರಶಾಂತ್.

ಈವರೆಗಿನ ಬೆಸ್ಟ್ ಸೀಸನ್

ಪಲ್ಲವಿ ಪ್ರಶಾಂತ್ ಅಸಲಿಗೆ ಒಬ್ಬರ ರೈತ, ತನ್ನ ತಂದೆಯೊಟ್ಟಿಗೆ ತಮ್ಮ ಕೃಷಿ ಮಾಡುತ್ತಾರೆ.

ಯುವ ರೈತ ಪ್ರಶಾಂತ್

ರೈತ ಕಾಯಕದ ಬಗ್ಗೆ ಅಪಾರ ಅಭಿಮಾನವುಳ್ಳ ಪಲ್ಲವಿ ಪ್ರಶಾಂತ್, ತಾವು ಮಾಡುವ ಕೃಷಿ ಕಾಯಕಗಳನ್ನು ವಿಡಿಯೋ ಮಾಡಿ ಅಪ್​ಲೋಡ್ ಮಾಡುತ್ತಿದ್ದರು.

ಕೃಷಿ ಕಾಯಕದ ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ತಮ್ಮ ಕಾಯಕದ ವಿಡಿಯೋ ಅಪ್​ಲೋಡ್ ಮಾಡುವ ಜೊತೆಗೆ ರೈತರ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಅವರ ವಿಡಿಯೋಗಳು ವೈರಲ್ ಆಗುತ್ತಿದ್ದವು.

ರೈತರ ಬಗ್ಗೆ ಹೆಮ್ಮೆ

ಬಿಗ್​ಬಾಸ್​ಗೆ ಹೋಗಬೇಕು ಎಂಬ ಕನಸು ಕಂಡಿದ್ದ ಪ್ರಶಾಂತ್, ತಮ್ಮ ವಿಡಿಯೋಗಳನ್ನು ನಾಗಾರ್ಜುನಾಗೆ ಸೇರುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಪ್ರಶಾಂತ್ ಮನವಿ 

ಅಂತೆಯೇ ಅವರ ವಿಡಿಯೋಗಳನ್ನು ಮೆಚ್ಚಿಕೊಂಡ ನಾಗಾರ್ಜುನ ಹಾಗೂ ಬಿಗ್​ಬಾಸ್ ತಂಡ ಈ ಬಾರಿ ಸ್ಪರ್ಧಿಯಾಗಿ ಅವರಿಗೆ ಅವಕಾಶ ನೀಡಿತ್ತು.

ದೊರಕಿದ ಅವಕಾಶ

ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪ್ರಶಾಂತ್, ಅತ್ಯದ್ಭುತವಾಗಿ ಆಡಿ ವಿನ್ನರ್ ಆಗಿದ್ದಾರೆ. ಅವರ ಛಲ ಹಾಗೂ ಅವರಲ್ಲಿರುವ ಸರಳ ಮುಗ್ಧತೆಯೇ ಅವರನ್ನು ಜನಪ್ರಿಯಗೊಳಿಸಿದೆ.

ಟ್ರೋಫಿ ಗೆದ್ದ ಪ್ರಶಾಂತ್

ಸಾಧಾರಣ ಕುಟುಂಬದಿಂದ ಬಂದಿರುವ ಅಮಾಯಕ ಯುವಕ ಪಲ್ಲವಿ ಪ್ರಶಾಂತ್​ನಲ್ಲಿ ಜನ ತಮ್ಮ ಬಿಂಬ ಕಂಡಿದ್ದಾರೆ ಹಾಗಾಗಿ ಆತನಿಗೆ ದೊಡ್ಡ ಅಭಿಮಾನಿ ವರ್ಗ ಸೃಷ್ಟಿಯಾಗಿದೆ. 

ದೊಡ್ಡ ಅಭಿಮಾನಿ ವರ್ಗ

‘ಕಾಂತಾರ 2’ ಸಿನಿಮಾದ ಒಟ್ಟು ಬಜೆಟ್ ಎಷ್ಟು ಗೊತ್ತೆ?