17 February 2025

Pic credit -  Pintrest

Preethi Bhat

ಸರ್ಪಸುತ್ತನ್ನು ಹತೋಟಿಗೆ ತರುವುದು ಹೇಗೆ?

ಸಾಮಾನ್ಯವಾಗಿ ಪಿತ್ತದೋಷದಿಂದ ಸರ್ಪಸುತ್ತು ಕಾಡುತ್ತದೆ, ದೇಹದಲ್ಲಿ ತ್ರಿದೋಷಗಳು ಸಮುತೋಲನ ಕಳೆದುಕೊಂಡಾಗಲೂ ಈ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

Pic credit -  Pintrest

ಆಯುರ್ವೇದದ ಪ್ರಕಾರ, ನಿರಾಹಾರ ಇಲ್ಲವೇ ಲಘು ಆಹಾರ ಸೇವನೆಯಿಂದ ಸರ್ಪಸುತ್ತನ್ನು ಹತೋಟಿಗೆ ತರಬಹುದು.

Pic credit -  Pintrest

ರಕ್ತ ಶುದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡಬಹುದು. ಅಥವಾ ಎಳನೀರನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುಡಿಯುವುದು.

Pic credit -  Pintrest

ಜ್ಯೇಷ್ಠಮಧು ಚೂರ್ಣ ಹಾಗೂ ಬೇವಿನ ಎಲೆಯನ್ನು ಅರೆದು ಲೇಪ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ ಅಥವಾ ಲೋಳೆಸರ, ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಕಲಸಿ ಹಚ್ಚಬಹುದು.

Pic credit -  Pintrest

ರಕ್ತಚಂದನ ಚೂರ್ಣ, ಅರ್ಜುನ ಮರದ ತೊಗಟೆಯ ಚೂರ್ಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದು ಬಹಳ ಒಳ್ಳೆಯದು.

Pic credit -  Pintrest

ವೈದ್ಯರು ಹೇಳುವ ಪ್ರಕಾರ, ಪಂಚಕರ್ಮ ಚಿಕಿತ್ಸೆ ಮಾಡಿಸಿ ಬಳಿಕ ಔಷಧ ಮಾಡಿದರೆ ಈ ಸಮಸ್ಯೆಗೆ ಉತ್ತಮ ಪರಿಹಾರ ದೊರೆಯುತ್ತದೆ.

Pic credit -  Pintrest

ಸಾಮಾನ್ಯವಾಗಿ ಸರ್ಪಸುತ್ತು ಕಾಣಿಸಿಕೊಂಡರೆ ಮಕ್ಕಳಿಂದ ಅಂತರ ಕಾಯ್ದುಕೊಳ್ಳಿ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ವಸ್ತುಗಳ ನಡುವೆ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ.

Pic credit -  Pintrest

ದಾಸವಾಳದ ಕೂದಲಿನ ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು