ದೇಶಕ್ಕಾಗಿ ಮಡಿದ ವೀರ ಯೋಧರಿಗೊಂದು ನಮನ

ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್​​ ವಿಜಯೋತ್ಸವ ಆಚರಿಸಲಾಗುತ್ತದೆ.

ಭಾರತೀಯ ಸೈನ್ಯ ಜುಲೈ 26, 1999ರಂದು ಪಾಕಿಸ್ತಾನವನ್ನು ಸೋಲಿಸಿತು.

ಜಮ್ಮುವಿನ ಲಡಾಖ್​​ನಲ್ಲಿರುವ ಒಂದು ಕಣಿವೆ ಪ್ರದೇಶ ಕಾರ್ಗಿಲ್.

ಒಟ್ಟು 150 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವೇ ಕಾರ್ಗಿಲ್ ಯುದ್ಧ.

ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಒಳನುಸುಳಲು ಪ್ರಯತ್ನಸಿದಕ್ಕೆ ಈ ಯುದ್ಧ ಸಂಭವಿಸಿತ್ತು.

ಕಾರ್ಗಿಲ್​​ ಯುದ್ಧದಲ್ಲಿ ವಿಜಯ ಸಾಧಿಸಿದ 25ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ.

ಈ ಯುದ್ಧದಲ್ಲಿ ಸುಮಾರು 500 ಭಾರತೀಯ ಮತ್ತು 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.

ನಗರದ ಟೋಲೋಲಿಂಗ್ ಬೆಟ್ಟದ ತಪ್ಪಲಿನಲ್ಲಿರುವ ಸ್ಮಾರಕದ ಮೇಲೆ ‘ಪುಷ್ಪ್ ಕಿ ಅಭಿಲಾಷ’ ಎಂಬ ಕವಿತೆಯನ್ನು ಕೆತ್ತಲಾಗಿದೆ.

ಭಾರತದ ಪ್ರಧಾನಿ ಪ್ರತಿ ವರ್ಷ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.