05-12-2023

ಲೋಕಸಭೆ ಚುನಾವಣೆ ಒಳಗಾಗಿ 2ಎ ಮೀಸಲಾತಿ ಘೋಷಿಸಬೇಕು: ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

Author: ಗಣಪತಿ ಶರ್ಮ

ಪಂಚಮಸಾಲಿ ಸಮುದಾಯದ ಶಾಸಕರ ಜೊತೆ ಬೆಳಗಾವಿಯಲ್ಲಿ ಸಭೆ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ.

ಸಭೆಯಲ್ಲಿ ಇಬ್ಬರು ಸಚಿವರು ಸೇರಿ ಸಮುದಾಯದ ಎಲ್ಲ ಶಾಸಕರು ಭಾಗಿಯಾಗಿದ್ದರು: ಸ್ವಾಮೀಜಿ

ಮೀಸಲಾತಿ ವಿಚಾರವಾಗಿ ಬಜೆಟ್ ಅಧಿವೇಶನದ ಬಳಿಕ ಸಭೆ ಕರೆಯುವುದಾಗಿ ಹೇಳಿ ಇನ್ನೂ ಕರೆದಿಲ್ಲ: ಸ್ವಾಮೀಜಿ

ಸಮುದಾಯದ ಒತ್ತಾಯ ಮೇರೆಗೆ ಹೆದ್ದಾರಿಯಲ್ಲಿ ಹೋರಾಟ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ನಾವು ದೊಡ್ಡ ಹೋರಾಟ ಮಾಡಿದ್ದೇವೆ.

ಅಧಿವೇಶನದ ವೇಳೆ ಧರಣಿ ನಡೆಸುವ ಬಗ್ಗೆ ಚರ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನೆರಡು ದಿನಗಳಲ್ಲಿ ಸಿಎಂ ಸಭೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ. ಪಂಚಮಸಾಲಿಯ ಎಲ್ಲಾ ನಾಯಕರ ಸಭೆ ಕರೆಯಲು ನಿರ್ಧರಿಸಿದ್ದೇವೆ.

ಸಿಎಂ ಜೊತೆ ಚರ್ಚಿಸಿ ಮುಂದಿನ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ ಎಂದ ಸ್ವಾಮೀಜಿ.

ಲೋಕಸಭೆ ಚುನಾವಣೆ ಒಳಗಾಗಿ 2ಎ ಮೀಸಲಾತಿ ಘೋಷಿಸಬೇಕು, ಕೇಂದ್ರದಲ್ಲಿ ಸಮುದಾಯಕ್ಕೆ ಒಬಿಸಿ ಮೀಸಲಾತಿ ಘೋಷಿಸಬೇಕು.