12-12-2023

ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಏನೇನಂದ್ರು ಯತ್ನಾಳ್

Author: ಗಣಪತಿ ಶರ್ಮ

ಸಂಸದರಂತೆ ಶಾಸಕರಿಗೂ ಉಚಿತ ವಿಮಾನಯಾನ ಟಿಕೆಟ್​ ಕೊಡಿ, ಪ್ರತ್ಯೇಕ ರಾಜ್ಯದ ಬೇಡಿಕೆಗೆ ಅವಕಾಶವಾಗದಂತೆ ಅಭಿವೃದ್ಧಿಯಾಗಲಿ: ಯತ್ನಾಳ್

ಅಭಿವೃದ್ಧಿ ವಿಚಾರದಲ್ಲಿ ನಮ್ಮ ಭಾಗದ ಜನಪ್ರತಿನಿಧಿಗಳ ತಪ್ಪು ಇದೆ. ಜನಪ್ರತಿನಿಧಿಗಳು ಅಗ್ರೆಸ್ಸಿವ್ ಆಗಿ ಅಭಿವೃದ್ಧಿ ಕೆಲಸ ಮಾಡಲಿಲ್ಲ ಎಂದ ಯತ್ನಾಳ್

ಮೈಸೂರು ಕರ್ನಾಟಕ ಅಭಿವೃದ್ಧಿ ಆಗಲು ಮಹಾರಾಜರು ಕಾರಣ. ನಮ್ಮಲ್ಲಿ ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಂತಾ ಇತ್ತು: ಯತ್ನಾಳ್

ನಿಜಾಮರ ಆಡಳಿತದಲ್ಲಿ ಗೋರಿಗಳ ಅಭಿವೃದ್ಧಿ ಬಿಟ್ಟರೆ ಏನೂ ಆಗಿಲ್ಲವೆಂದ ಯತ್ನಾಳ್

ರಮೇಶ್​ ಜಾರಕಿಹೊಳಿ ಮುಗಿಸಲು‌ ಹಲ್ಕಾ ರಾಜಕೀಯ ಮಾಡಿದರು ಎಂದು ದೂರಿದ ಬಸನಗೌಡ

‘ಹಲ್ಕಾ ರಾಜಕೀಯ’ ಪದ ತೆಗೆಯಿರಿ ಎಂದ ಸ್ಪೀಕರ್ ಖಾದರ್: ನೀವೇ ತೆಗೆಸಿ ಎಂದ ಯತ್ನಾಳ್

ಉತ್ತರ ಕರ್ನಾಟಕಕ್ಕೆ ಅನುದಾನ ಕೇಳಿದರೆ 100 ರೂ.ನಲ್ಲಿ 20 ರೂಪಾಯಿ ಸಿಗುತ್ತಿತ್ತು ಎಂದ ಯತ್ನಾಳ್

ನಮ್ಮ ಕಡೆ ಎಲ್ಲಾ ದೊಡ್ಡ ಮನೆತನದವರು ಶಾಸಕರಾಗುತ್ತಾರೆ, ಹೀಗಾಗಿ ನಮ್ಮ ಜನರು ಪ್ರಶ್ನೆ ಮಾಡುವುದಿಲ್ಲ: ಯತ್ನಾಳ್​​