ಏಷ್ಯನ್ ಗೇಮ್ಸ್ ನ ಮಿಶ್ರ ನಡಿಗೆಯ ಸ್ಪರ್ಧೆಯಲ್ಲಿ ಭಾರತದ ಮಂಜು ರಾಣಿ ಮತ್ತು ರಾಮ್ ಬಾಬು ಜೊತೆಗೂಡಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ 23 ವರ್ಷದ ಯುವ ಕ್ರೀಡಾಪಟು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಭಾರತಕ್ಕೆ ಕಂಚಿನ ಪದಕ

ನಡಿಗೆ ಸ್ಪರ್ಧೆಯಲ್ಲಿ ಮುಖ್ಯವಾಗಿ ಬೇಕಿರುವುದು ಅತ್ಯುತ್ತಮ ಶೂಸ್​. ಆದರೆ ಅಂತಹ ಶೂಗಳನ್ನು ಖರೀದಿಸಲು ಮಂಜು ರಾಣಿ ಬಳಿ ಹಣವಿರಲಿಲ್ಲ.

ಸವಾಲುಗಳ ಸಾಧನೆ

ಮಗಳಿಗೆ ಉತ್ತಮ ತರಬೇತಿ ನೀಡಲು ತಂದೆ ಜಮೀನನ್ನೇ ಮಾರಿದ್ದರು. ಈ ಮೂಲಕ ಮಗಳ ಕನಸಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದರು. ಇದರಿಂದ ಇಂದು ಮಂಜು ರಾಣಿ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಯಿತು.

ಜಮೀನು ಮಾರಿದ ತಂದೆ

ಇದಾಗ್ಯೂ ಸಾಲದ ಸುಳಿಯಲ್ಲಿ ಸಿಲುಕಿದ್ದರು. 2019 ರಲ್ಲಿ 7 ವರ್ಷಗಳವರೆಗೆ ತಮ್ಮ ಕ್ರೀಡಾ ಸಾಧನೆಗಾಗಿ 8 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು.

8 ಲಕ್ಷ ರೂ. ಸಾಲ

ಇದೀಗ ಏಷ್ಯನ್ ಗೇಮ್ಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಮಂಜು ರಾಣಿಯ ಈ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ಅಭಿನಂದನೆ