11 JULY 2024

Pic credit - iStock

ರಥಯಾತ್ರೆಗೂ 15 ದಿನ ಮೊದಲು ಪುರಿ ಜಗನ್ನಾಥ ಸ್ವಾಮಿಯ ಆರೋಗ್ಯ ಕೆಡಲು ಕಾರಣವೇನು?

Author: Sushma Chakre

ಭಗವಾನ್ ಜಗನ್ನಾಥ ಶ್ರೀಕೃಷ್ಣನ ಒಂದು ರೂಪ. ಹಿಂದೂ ಧರ್ಮದಲ್ಲಿ ಅದರಲ್ಲೂ ವಿಶೇಷವಾಗಿ ಒರಿಸ್ಸಾದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪೂಜ್ಯ ದೇವರುಗಳಲ್ಲಿ ಒಬ್ಬರು. ಜಗನ್ನಾಥ ಎಂದರೆ 'ಬ್ರಹ್ಮಾಂಡದ ಅಧಿಪತಿ'. ಆತನನ್ನು ತನ್ನ ಒಡಹುಟ್ಟಿದವರಾದ ಬಾಲಭದ್ರ ಮತ್ತು ಸುಭದ್ರೆಯರೊಂದಿಗೆ ಜಗನ್ನಾಥ ದೇವಾಲಯದಲ್ಲಿ ಪೂಜಿಸಲಾಗುತ್ತದೆ.

Pic credit - iStock

ಭಗವಾನ್ ಜಗನ್ನಾಥ ಯಾರು?

ಪುರಿ ದೇವಸ್ಥಾನವು ಚಾರ್ ಧಾಮ್ ಯಾತ್ರೆಯ ಒಂದು ಭಾಗವಾಗಿದೆ. ಪ್ರತಿ ವರ್ಷವೂ ಇಲ್ಲಿ ರಥಯಾತ್ರೆಯನ್ನು ಆಯೋಜಿಸಲಾಗುತ್ತದೆ. ಅಲ್ಲಿ ಬ್ರಹ್ಮಾಂಡದ ಭಗವಂತ ತನ್ನ ಒಡಹುಟ್ಟಿದವರೊಂದಿಗೆ ಗುಂಡಿಚಾ ದೇವಸ್ಥಾನದಲ್ಲಿ ತನ್ನ ಚಿಕ್ಕಮ್ಮನನ್ನು ಭೇಟಿಯಾಗಲು ಹೊರಡುತ್ತಾನೆ.

Pic credit - iStock

ಪುರಿ ಜಗನ್ನಾಥ ರಥಯಾತ್ರೆ

ಪುರಿಯಲ್ಲಿ ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರೆಯ ಸುಂದರವಾದ ವಿಗ್ರಹವನ್ನು ಮರದಿಂದ ಕೆತ್ತಲಾಗಿದೆ. ಇದು ಅಮೃತಶಿಲೆ ಮತ್ತು ಕಲ್ಲಿನಿಂದ ಮಾಡಿದ ಬೇರೆ ದೇಗುಲಗಳ ವಿಗ್ರಹಗಳಿಗಿಂತ ಭಿನ್ನವಾಗಿದೆ.

Pic credit - iStock

ಪುರಿ ಜಗನ್ನಾಥ ರಥಯಾತ್ರೆ

ರಥ ಯಾತ್ರೆ ಅಥವಾ ರಥೋತ್ಸವವು ಜಗನ್ನಾಥನಿಗೆ ಸಮರ್ಪಿತವಾದ ಅತ್ಯಂತ ಭವ್ಯವಾದ ಉತ್ಸವಗಳಲ್ಲಿ ಒಂದಾಗಿದೆ. ಇದಕ್ಕೆ ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 

Pic credit - iStock

ಜಗನ್ನಾಥನ ರಥಯಾತ್ರೆ

ರಥಯಾತ್ರೆಯ ವೇಳೆ ಜಗನ್ನಾಥ ದೇವಾಲಯದಿಂದ ದೇವತೆಗಳನ್ನು ಹೊರತೆಗೆದು ಸುಂದರವಾಗಿ ಅಲಂಕರಿಸಿದ ರಥಗಳಲ್ಲಿ ಇರಿಸಲಾಗುತ್ತದೆ. ನಂತರ ಪುರಿಯ ಬೀದಿಗಳಲ್ಲಿ ರಥವನ್ನು ಭಕ್ತರು ಎಳೆಯುತ್ತಾರೆ. 

Pic credit - iStock

ಜಗನ್ನಾಥನ ರಥಯಾತ್ರೆ

ರಥಯಾತ್ರೆ ಬಗ್ಗೆ ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಅದು ಪ್ರಾರಂಭವಾಗುವ ಮೊದಲು, ಜಗನ್ನಾಥ ಸ್ವಾಮಿ 15 ದಿನಗಳ ಕಾಲ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಮತ್ತು ಪ್ರತ್ಯೇಕವಾಗಿರುತ್ತಾನೆ. ಆ ಸಮಯದಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಏಕೆಂದರೆ ಇದು ಅವರ ವಿಶ್ರಾಂತಿಯ ಸಮಯ ಎಂದು ನಂಬಲಾಗಿದೆ.

Pic credit - iStock

ಸ್ನಾನ ಪೂರ್ಣಿಮಾ

ಈ ಬಗ್ಗೆ ಇರುವ ದಂತಕತೆಗಳಲ್ಲಿ ಮೊದಲನೆಯದಾಗಿ, ಸ್ನಾನ ಪೂರ್ಣಿಮೆಯ ಸಮಯದಲ್ಲಿ ಭಗವಾನ್ ಜಗನ್ನಾಥ, ಬಾಲಭದ್ರ,  ದೇವಿ ಸುಭದ್ರಾ ದೇವಿ ಸುಮಾರು 108 ಕಲಶಗಳ ನೀರಿನಿಂದ ಸ್ನಾನ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೇವಾಲಯದ ಆವರಣದಲ್ಲಿರುವ ಸುನಾ ಕುವಾ ಅಥವಾ ಚಿನ್ನದ ಬಾವಿಯಿಂದ ನೀರನ್ನು ಅಭಿಷೇಕ ಮಾಡಲಾಗುತ್ತದೆ.

Pic credit - iStock

ಇದಕ್ಕೆ ಕಾರಣವೇನು?

ಭಗವಾನ್ ಜಗನ್ನಾಥನು ತನ್ನ ಭಕ್ತರಂತೆ ಮಾನವ ಗುಣಗಳನ್ನು ಹೊಂದಿದ್ದಾನೆ ಎಂದು ಭಾವಿಸಲಾಗಿದೆ. ದೀರ್ಘ ಪ್ರವಾಸವನ್ನು ಪ್ರಾರಂಭಿಸುವ ಮೊದಲು ಮಾನವರು ಹೇಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಇಷ್ಟಪಡುತ್ತಾರೆಯೋ ಹಾಗೇ ಭಗವಾನ್ ಜಗನ್ನಾಥ ಕೂಡ ವಿಶ್ರಾಂತಿ ಪಡೆಯುತ್ತಾನೆ ಎಂಬುದು ಇನ್ನೊಂದು ದಂತಕತೆ.

Pic credit - iStock

ರಥಯಾತ್ರೆಗೆ ಸಜ್ಜಾಗುತ್ತಿದೆ

ಈ ಸಮಯದಲ್ಲಿ ಅವರಿಗೆ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಅವರು ಚೇತರಿಸಿಕೊಳ್ಳಲು ಸಹಾಯ ಮಾಡಲು ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ ಎಂಬುದು ವಿಶೇಷ.

Pic credit - iStock

ಗಿಡಮೂಲಿಕೆಯ ಚಿಕಿತ್ಸೆ

ಕೊನೆಯಲ್ಲಿ ಅಮಾವಾಸ್ಯೆಯ ದಿನದಂದು, ದೇವತೆಗಳು ತಮ್ಮ ಶಕ್ತಿಯನ್ನು ಮರಳಿ ಪಡೆಯುತ್ತಾರೆ ಎಂದು ನಂಬಲಾಗಿದೆ. ಈ ಘಟನೆಯನ್ನು ನಬ ಜೌಬಾನ ದರ್ಶನ ಎಂದು ಆಚರಿಸಲಾಗುತ್ತದೆ, ಅಂದರೆ 'ಹೊಸ ಯುವಕರ ವೀಕ್ಷಣೆ'. ಈ ದಿನ, ಭಕ್ತರು ದೇವರು ಗುಣಮುಖರಾಗಿ, ರಥಯಾತ್ರೆಗೆ ತೆರಳುವ ಮುನ್ನ ಮೊದಲ ದರ್ಶನವನ್ನು ಪಡೆಯುತ್ತಾರೆ.

Pic credit - iStock

ಅಮವಾಸ್ಯೆಯ ಆಚರಣೆ

ದೇವರು ಏಕೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ವಿವರಿಸುವ ಮತ್ತೊಂದು ದಂತಕಥೆ ಭಾವನಾತ್ಮಕವಾಗಿದೆ. ಜಗನ್ನಾಥನ ಪ್ರೀತಿಯ ಭಕ್ತ ಮಾಧವ್ ದಾಸ್. ಅವರು ಆಗಾಗ ಜಗನ್ನಾಥನನ್ನು ಭೇಟಿಯಾಗುತ್ತಿದ್ದರು. ಒಂದು ಬಾರಿ ರಥಯಾತ್ರೆ ಪ್ರಾರಂಭವಾಗುವ ಮೊದಲು ಮಾಧವ್ ದಾಸ್ ತೀವ್ರ ಅನಾರೋಗ್ಯಕ್ಕೆ ಒಳಗಾಗೆ ಯಾತ್ರೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. 

Pic credit - iStock

ಭಕ್ತ ಮಾಧವ್ ದಾಸ್ ಕಥೆಗಳು

ತನ್ನ ಭಕ್ತ ಮಾಧವ್ ದಾಸ್​ಗೆ ರಥಯಾತ್ರೆಗೆ ಹಾಜರಾಗಲು ಅನುವು ಮಾಡಿಕೊಡಲು ಭಗವಾನ್ ಜಗನ್ನಾಥ ಅನಾರೋಗ್ಯಕ್ಕೆ ಒಳಗಾದರು ಮತ್ತು ಸ್ವಲ್ಪ ಸಮಯದವರೆಗೆ ಯಾತ್ರೆಯನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತದೆ.

Pic credit - iStock

ಭಕ್ತ ಮಾಧವ್ ದಾಸ್ ಕಥೆಗಳು