ಆಕಸ್ಮಿಕ ಸಿನಿಮಾದ ಕತೆಯನ್ನು ಟಿಎಸ್ ನಾಗಾಭರಣ ಬರೆದಿದ್ದು ಶಿವರಾಜ್ ಕುಮಾರ್ ಅವರಿಗಾಗಿ.

ಮೊದಲಿಗೆ ಅಣ್ಣಾವ್ರಿಗೆ ಸಿನಿಮಾದ ಕತೆ ಹೇಳಿದಾಗ ಅಣ್ಣಾವ್ರು ಪ್ರತಿಕ್ರಿಯಿಸಲಿಲ್ಲವಂತೆ. 

ಬಳಿಕ ಪಾರ್ವತಮ್ಮ ಹಾಗೂ ವರದಪ್ಪನವರಿಗೆ ಕತೆ ಹೇಳಿದ್ದಾರೆ ನಾಗಾಭರಣ.

ಆಗ ವರದಪ್ಪನವರು, ಈ ಕತೆಯನ್ನು ಶಿವರಾಜ್ ಕುಮಾರ್ ಬದಲಿಗೆ ಅಣ್ಣಾವ್ರಿಗೆ ಮಾಡಿ ಎಂದಿದ್ದಾರೆ.

ಶಿವಣ್ಣನಿಗೆ ಮಾಡಿದ ಕತೆ ಅಣ್ಣಾವ್ರಿಗೆ ಹೇಗೆ ಮಾಡುವುದು ಎಂದು ಗೊಂದಲಕ್ಕೆ ಬಿದ್ದಿದ್ದಾರೆ ನಾಗಾಭರಣ

ಒಂದು ವಾರ ಕಾಲಾವಕಾಶ ಕೇಳಿದ ನಾಗಾಭರಣ, ನಾಯಕನ ಪಾತ್ರಕ್ಕೆ ಅಣ್ಣಾವ್ರು ಸೂಕ್ತವೇ ಪರಿಶೀಲಿಸಿಕೊಂಡರಂತೆ.

ಆ ಬಳಿಕ ಬಂದು ಅಣ್ಣಾವ್ರಿಗೆ ಆಕಸ್ಮಿಕ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

1993 ರಲ್ಲಿ ಬಿಡುಗಡೆ ಆದ ಆಕಸ್ಮಿಕ ಸೂಪರ್ ಡೂಪರ್ ಹಿಟ್ ಆಗಿದ್ದು ಈಗ ಇತಿಹಾಸ.

ಆ ನಂತರ ನಾಗಾಭರಣ, ಶಿವರಾಜ್ ಕುಮಾರ್ ಅವರಿಗಾಗಿ ಜನುಮದ ಜೋಡಿ ಸಿನಿಮಾ ಮಾಡಿದರು.