ಕಣ್ಮನ ಸೆಳೆಯುವ ವರಂಗ ಜೈನ ಬಸದಿ

ವರಂಗ ಕಾರ್ಕಳ ತಾಲೂಕಿನಲ್ಲಿರುವ ಒಂದು ಜೈನ ಯಾತ್ರಾ ಸ್ಥಳ.

ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ ಈ ತಾಣವನ್ನು ಕಣ್ತುಂಬಿಸಿಕೊಳ್ಳಬಹುದು.

ವಿಶಾಲ ಕೆರೆಯ ಮಧ್ಯೆ ಪದ್ಮಾವತಿ ದೇವಿಯ ಬಸದಿಗೆ ಭೇಟಿ ನೀಡುವುದೇ ಕಣ್ಣಿಗೊಂದು ಹಬ್ಬ.

14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ.

ಬೆಂಗಳೂರಿನಿಂದ ವರಂಗ ಸುಮಾರೂ 370 ಕಿ.ಮೀ. ಹಾಗೂ ಮಂಗಳೂರಿನಿಂದ 76 ಕಿಮಿ ದೂರದಲ್ಲಿದೆ.

ಒಂದೆಡೆ ಪಶ್ಚಿಮ ಘಟ್ಟದ ಹಸಿರು ಬೆಟ್ಟಗಳು ಹಾಗೂ ಇನ್ನೊಂದೆಡೆ ಹಚ್ಚ ಹಸಿರಿನ ಗದ್ದೆ ಇಲ್ಲಿನ ವಿಶೇಷ.