AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ

ಈ ರೂಪಾಂತರ ಪ್ರಕ್ರಿಯೆ ಇಲ್ಲಿಗೇ ನಿಲ್ಲುವುದಿಲ್ಲ, ಶೀಘ್ರದಲ್ಲೇ ಇನ್ನೂ ನಾಲ್ಕು ಬಗೆಯ ರೂಪಾಂತರಿ ಮಾದರಿಗಳು ಉಲ್ಬಣಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಾಣು ರೂಪಾಂತರ ಡೆಲ್ಟಾಕ್ಕೆ ನಿಲ್ಲುವುದಿಲ್ಲ; ಲ್ಯಾಂಬ್ಡಾ, ಕಪ್ಪಾ ಸೇರಿದಂತೆ ಒಟ್ಟು 4 ಮಾದರಿಗಳು ಈಗಾಗಲೇ ಪತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Jun 29, 2021 | 9:39 AM

Share

ಕೊರೊನಾ ವೈರಾಣು ಜಗತ್ತಿನೆಲ್ಲೆಡೆ ವ್ಯಾಪಿಸಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಆರಂಭಿಕ ಹಂತದಲ್ಲಿದ್ದ ವೈರಾಣು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಾಗಿ ರೂಪಾಂತರ ಹೊಂದುತ್ತಾ ಇದೀಗ ಹಲವು ಸ್ವರೂಪ ಪಡೆದಿದೆ. ಈ ರೂಪಾಂತರ ಪ್ರಕ್ರಿಯೆ ಇಲ್ಲಿಗೇ ನಿಲ್ಲುವುದಿಲ್ಲ, ಶೀಘ್ರದಲ್ಲೇ ಇನ್ನೂ ನಾಲ್ಕು ಬಗೆಯ ರೂಪಾಂತರಿ ಮಾದರಿಗಳು ಉಲ್ಬಣಿಸಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಾಲ್ಕು ಹೊಸ ಮಾದರಿಗಳ ಪೈಕಿ ಎರಡು ಡೆಲ್ಟಾ (B.1.617.2) ಕುಟುಂಬಕ್ಕೆ ಸೇರಿದ B.1.617.3 ಹಾಗೂ B.1.617.1 (ಕಪ್ಪಾ) ಆಗಿವೆ. ಇನ್ನೆರಡು ಮಾದರಿಗಳು B.1.1.318 ಹಾಗೂ C.37 (ಲ್ಯಾಂಬ್ಡಾ) ಎಂದು ತಜ್ಞರು ಹೇಳಿದ್ದಾರೆ.

ಈ ಪೈಕಿ B.1.617.3 ಹಾಗೂ B.1.617.1 ಮಾದರಿಗಳು ಡೆಲ್ಟಾ, ಡೆಲ್ಟಾ ಪ್ಲಸ್ ತಳಿಗಿಂತಲೂ ಕಡಿಮೆ ಪರಿಣಾಮಕಾರಿಯಾಗಿವೆ. ಆದರೆ, B.1.1.318 ತಳಿಯು 14 ರೂಪಾಂತರಿಗಳನ್ನು ಹೊಂದಿದೆ ಮತ್ತು ಲ್ಯಾಂಬ್ಡಾ (C.37) ಅತಿ ವೇಗವಾಗಿ ಹಬ್ಬುವ ಶಕ್ತಿ ಹೊಂದಿದ್ದು, ಜೂನ್​ 3ರಂದು ಅದನ್ನು ಅಧ್ಯಯನಕ್ಕೆ ಒಳಪಡಿಸಿರುವ ಮಾದರಿ ಎಂದು ಗುರುತಿಸಲಾಗಿದೆ. ಮೇಲಿನ ನಾಲ್ಕು ತಳಿಗಳಲ್ಲಿ B.1.617.3 ಹಾಗೂ B.1.1.318 ಈಗಾಗಲೇ ಭಾರತದಲ್ಲಿ ಕಾಣಿಸಿಕೊಂಡಿವೆ. ಲ್ಯಾಂಬ್ಡಾ (C.37) ಈವರೆಗೆ ಬಂದಿಲ್ಲವಾದರೂ ಮುಂದೆ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಡೆಲ್ಟಾ ಮಾದರಿ ಭಾರತದಲ್ಲೇ ಕಾಣಿಸಿಕೊಂಡಿದ್ದರಿಂದ ಅದು ರೂಪಾಂತರ ಹೊಂದಿ ದೇಶದೆಲ್ಲೆಡೆ ವ್ಯಾಪಿಸಲಾರಂಭಿಸಿತು. ಕಪ್ಪಾ (B.1.617.1), ಡೆಲ್ಟಾ (B.1.617.2) ಮತ್ತು ಇವುಗಳ ಕುಟುಂಬಕ್ಕೆ ಸೇರಿದ ಇನ್ನೊಂದು ತಳಿ B.1.617.3 ಇವೆಲ್ಲವೂ ಮಹಾರಾಷ್ಟ್ರದಲ್ಲಿ ಮೊದಲು ಕಾಣಿಸಿಕೊಂಡ SARS-CoV-2, B.1.617 ಮಾದರಿಯ ರೂಪಾಂತರಿಗಳಾಗಿವೆ. ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು B.1.617.3 ಮಾದರಿಯನ್ನು ಕಪ್ಪಾ ತಳಿಯೊಂದಿಗೆ ಸೇರಿಸಿದೆ.

B.1.617.3 ತಳಿಯ ಒಟ್ಟು 161 ಜಿನೋಮ್​ ಸೀಕ್ವೆನ್ಸ್​ಗಳು ಜೂನ್​ 22ರ ತನಕ ವಿಶ್ವ ಮಟ್ಟದಲ್ಲಿ ಪತ್ತೆಯಾಗಿದ್ದು, ಆ ಪೈಕಿ 148 ಜಿನೋಮ್​ ಸೀಕ್ವೆನ್ಸ್ ಭಾರತದಲ್ಲೇ ವರದಿಯಾಗಿದೆ. ಅದರಾಚೆಗೆ ಭಾರತದಲ್ಲಿ ಕಪ್ಪಾ (B.1.617.1) ತಳಿಯ ಸುಮಾರು 3,083 ಸೀಕ್ವೆನ್ಸ್​ ಭಾರತದಲ್ಲಿ ಕಂಡುಬಂದಿದ್ದು, ವಿಶ್ವದಾದ್ಯಂತ ಒಟ್ಟು 4,217 ಸೀಕ್ವೆನ್ಸ್​ ವರದಿಯಾಗಿದೆ.

ಇನ್ನು B.1.1.318 ಮಾದರಿಯು E484K ತಳಿಯ ರೂಪಾಂತರಿಯಾಗಿದ್ದು, ಅದು ಆಫ್ರಿಕಾದB.1.351 ಮಾದರಿಯಲ್ಲಿ ಮೊದಲು ಪತ್ತೆಯಾಗಿದೆ. ಅಲ್ಲದೇ, ಬ್ರೆಜಿಲ್​ನಲ್ಲಿ ಪತ್ತೆಯಾದ B.1.1.28 ಮಾದರಿಯಲ್ಲೂ ಕಾಣಸಿಕ್ಕಿದೆ. ಸದ್ಯ ಜಿಐಎಸ್​ಅಐಡಿ ವರದಿ ಪ್ರಕಾರ ಜಗತ್ತಿನಲ್ಲಿ ಈ ಮಾದರಿಯ 173 ಸೀಕ್ವೆನ್ಸ್​ಗಳು ಪತ್ತೆಯಾಗಿದ್ದು, ಭಾರತದಲ್ಲಿ ಕೇವಲ 2 ಸೀಕ್ವೆನ್ಸ್​ ಮಾತ್ರ ಲಭ್ಯವಾಗಿದೆ.

ಅಂತೆಯೇ, ಲ್ಯಾಂಬ್ಡಾ (C.37) ತಳಿಯು B.1.1.1 ತಳಿಯಿಂದ ಬಂದಿದ್ದು, ಇದು ಮೊದಲು ಬ್ರೆಜಿಲ್​ ದೇಶದ ದಕ್ಷಿಣ ಭಾಗದಲ್ಲಿ ಕಂಡುಬಂದಿದೆ. ಇದು ಪೆರು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದು, ಉತ್ತರ ಹಾಗೂ ದಕ್ಷಿಣ ಅಮೆರಿಕಾ ಮತ್ತು ಯುರೋಪ್ ಭಾಗದಲ್ಲಿಯೂ ಕಾಣಿಸಿಕೊಂಡಿದೆ. ಈ ಮಾದರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್​ ಆಫ್ ಇಂಟ್ರೆಸ್ಟ್​ ಎಂದು ವರ್ಗೀಕರಿಸಿದ್ದು, ಕೆಲ ತಜ್ಞರ ಪ್ರಕಾರ ಇದು ವೇರಿಯಂಟ್ ಆಫ್ ಕನ್ಸರ್ನ್​ (ಚಿಂತನೀಯ ಮಾದರಿ) ಆಗಿ ಮಾರ್ಪಾಡು ಪಡೆಯುವ ಸಾಧ್ಯತೆ ಅಧಿಕವಿದೆ.

ಜಿಐಎಸ್​ಎಐಡಿ ವರದಿ ಪ್ರಕಾರ ಈ ತನಕ ಸುಮಾರು 1,845 ಲ್ಯಾಂಬ್ಡಾ ಸೀಕ್ವೆನ್ಸ್​ಗಳು ವಿಶ್ವದೆಲ್ಲೆಡೆ ಕಾಣಸಿಕ್ಕಿವೆ. ಜೂನ್​ 25ರಂದು ತಜ್ಞರು ಈ ಮಾದರಿ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದು, ಇದು ಉಳಿದೆಲ್ಲವಕ್ಕಿಂತಲೂ ವೇಗವಾಗಿ ಹಬ್ಬುವ ಶಕ್ತಿ ಹೊಂದಿದ್ದು, ದೇಹದಲ್ಲಿನ ಪ್ರತಿಕಾಯಗಳನ್ನೂ ನಿಸ್ಸಹಾಯಕಗೊಳಿಸುವಷ್ಟು ಪ್ರಬಲವಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್​ ಪರಿಣಾಮ ಹೀಗಿದೆ; ಕೊರೊನಾ ಲಸಿಕೆ ಪಡೆದವರಿಗೆ ಹೆಚ್ಚು ಸಮಸ್ಯೆ ಇಲ್ಲ: ಡಾ.ಎನ್​.ಕೆ.ಅರೋರಾ 

Delta Plus Variant: ಡೆಲ್ಟಾ ಪ್ಲಸ್​ ಮಾದರಿಯ ಪ್ರಾಥಮಿಕ ಹಂತದ ಗುಣಲಕ್ಷಣಗಳೇನು?

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ