ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?

ಅಮೆರಿಕಾದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಫೇಸ್​ಬುಕ್, ‘ಆ್ಯಪಲ್​ ಆಪರೇಟಿಂಗ್ ಸಿಸ್ಟಂನ ಹೊಸ ಅಪ್​ಡೇಟ್​ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹೊರೆಯಾಗಲಿದೆ’ ಎಂದು  ವ್ಯಾಖ್ಯಾನಿಸಿದೆ.

ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?
ಆ್ಯಪಲ್ ಮತ್ತು ಫೇಸ್​ಬುಕ್ (ಪ್ರಾತಿನಿಧಿಕ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 18, 2020 | 8:53 PM

ವಾಷಿಂಗ್​ಟನ್: ಜಾಗತಿಕ ಟೆಕ್ ದಿಗ್ಗಜ ಕಂಪನಿಗಳಾದ ಫೇಸ್​ಬುಕ್ ಮತ್ತು ಆ್ಯಪಲ್​ ನಡುವಣ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವಂತಿಲ್ಲ. ಬಳಕೆದಾರರ ದತ್ತಾಂಶ ಉಪಯೋಗಿಸುವ ಕುರಿತು ಎರಡೂ ಕಂಪನಿಗಳು ಕೆಸರೆರೆಚಾಟದಲ್ಲಿ ನಿರತವಾಗಿವೆ. ಅಮೆರಿಕಾದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಫೇಸ್​ಬುಕ್, ‘ಆ್ಯಪಲ್​ ಆಪರೇಟಿಂಗ್ ಸಿಸ್ಟಂನ ಹೊಸ ಅಪ್​ಡೇಟ್​ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹೊರೆಯಾಗಲಿದೆ’ ಎಂದು  ವ್ಯಾಖ್ಯಾನಿಸಿದೆ.

ಆ್ಯಪಲ್​ ಐಒಎಸ್-14 ಕಾರ್ಯಾಚರಣೆ ವ್ಯವಸ್ಥೆಗೆ (IOS-14 Operating System) ಹೊಸ ಅಪ್​ಡೇಟ್​ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಅಪ್​ಡೇಟ್​ನಲ್ಲಿ ಟ್ರ್ಯಾಕಿಂಗ್​ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಾಗಿ ಆ್ಯಪಲ್ ಘೋಷಿಸಿದೆ. ಆ್ಯಪಲ್​ನ ಈ ಕ್ರಮ ಇದೀಗ ಫೇಸ್​ಬುಕ್​ನ ಕೆಂಗಣ್ಣಿಗೆ ಗುರಿಯಾಗಿದೆ.

ಫೇಸ್​ಬುಕ್​ನ ವಾದವೇನು? ಕಿರು ಉದ್ದಿಮೆದಾರರು ಮತ್ತು ಗ್ರಾಹಕರ ನಡುವಣ ಬೆಸುಗೆಗೆ ಆ್ಯಪಲ್​ನ ಹೊಸ ನಿಯಮಗಳಿಂದ ತೊಂದರೆಯಾಗಲಿದೆ. ನಿರ್ದಿಷ್ಟ ಗುಂಪಿನ ಜನರಿಗೆ ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ತಲುಪಿಸಲು ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ. ತನ್ನ ಬಳಕೆದಾರರ ಮೇಲೆ ಆ್ಯಪಲ್​ ಈ ನಿಯಮಗಳನ್ನು ಬಲವಂತವಾಗಿ ಜಾರಿಗೊಳಿಸುತ್ತಿದೆ. ಆ್ಯಪಲ್​ನ ಈ ಕ್ರಮವು ಮುಕ್ತ ಅಂತರ್ಜಾಲ ಪರಿಕಲ್ಪನೆಯ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದು ಫೇಸ್​ಬುಕ್ ವಿಶ್ಲೇಷಿಸಿದೆ.

ಆ್ಯಪಲ್​ನ ವಾದವೇನು?

ಐಒಎಸ್​-14ಕ್ಕೆ ಬಿಡುಗಡೆ ಮಾಡುತ್ತಿರುವ ಅಪ್​ಡೇಟ್​ಗಳನ್ನು ಆ್ಯಪಲ್ ಸಮರ್ಥಿಸಿಕೊಂಡಿದೆ. ತಾವು ಬಳಸುತ್ತಿರುವ ಉಪಕರಣಗಳಿಂದ ಎಂಥ ದತ್ತಾಂಶಗಳನ್ನು ಯಾರೆಲ್ಲಾ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಬಳಕೆದಾರರಿಗೆ ಇರಬೇಕು. ತಮ್ಮ ದತ್ತಾಂಶಗಳು ಅಂತರ್ಜಾಲದಲ್ಲಿ ನಿರ್ದಿಷ್ಟ ಸಂಸ್ಥೆಗಳಿಗೆ ನೀಡುವ ಅಥವಾ ಬಿಡುವ ಆಯ್ಕೆ ಬಳಕೆದಾರರಿಗೆ ಇರಬೇಕು. ಆ್ಯಪ್​ಸ್ಟೋರ್​ಗೆ ಬರುವ ಆ್ಯಪ್​ಗಳು ಇಂಥ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಬೇಕು ಎಂಬ ಸ್ಪಷ್ಟ ನಿಲುವನ್ನು ಆ್ಯಪಲ್ ತಳೆದಿದೆ.

ಇದನ್ನೂ ಓದಿ: ಬಜರಂಗ ದಳಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ; ಸಂಸದೀಯ ಸಮಿತಿಗೆ ಫೇಸ್​ಬುಕ್​ ವಿವರಣೆ

ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ಫೇಸ್​ಬುಕ್ ನೀಡಿರುವ ಜಾಹಿರಾತು

ಕಾಳಜಿಯೋ? ಹುನ್ನಾರವೋ?

ಆ್ಯಪಲ್​ ತನ್ನ ಆಪರೇಟಿಂಗ್ ಸಿಸ್ಟಂನಿಂದ ದತ್ತಾಂಶ ಸೋರಿಕೆಗೆ ತಡೆಯೊಡ್ಡುವ ಮಾತನಾಡಿದ ನಂತರ ಫೇಸ್​ಬುಕ್ ಕಿರು ಉದ್ದಿಮೆಗಳ ಪರವಾಗಿ ಮಾತನಾಡಲು ಶುರು ಮಾಡಿದೆ. ಸಣ್ಣ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರ ಸಂಸ್ಥೆಗಳ ಜಾಹೀರಾತನ್ನು ನಿರ್ದಿಷ್ಟ ಗುಂಪಿಗೆ (ಟಾರ್ಗೆಟ್ ಆಡಿಯನ್ಸ್) ತಲುಪಿಸಲು ಆ್ಯಪಲ್​ನ ನಿಯಮದಿಂದ ಅಡಚಣೆಯಾಗುತ್ತದೆ ಎಂದು ವಾದ ಮಾಡುತ್ತಿದೆ.

ಕೆಲ ಜಾಲತಾಣಗಳಲ್ಲಿ ಪ್ರಕಟವಾಗಿರುವ ತಜ್ಞರ ವಿಶ್ಲೇಷಣೆಗಳ ಪ್ರಕಾರ ಈ ನಿಲುವಿನ ಹಿಂದೆ ಫೇಸ್​ಬುಕ್​ನ ಸ್ವಯಂ ಹಿತಾಸಕ್ತಿಯೂ ಇದೆ. ಕಿರು ಉದ್ದಿಮೆಗಳ ಜಾಹೀರಾತು ಪ್ರಸಾರದಿಂದ (ಬೂಸ್ಟಿಂಗ್) ಫೇಸ್​ಬುಕ್​​ಗೆ ಹಣ ಪಾವತಿಯಾಗುತ್ತದೆ. ಟಾರ್ಗೆಟ್ ಆಡಿಯನ್ಸ್​ ಗುರುತಿಸಲು ಫೇಸ್​ಬುಕ್ ಬಳಕೆದಾರರ ಮಾಹಿತಿಯನ್ನು ತನ್ನ ಸೂತ್ರಗಳ (ಆಲ್ಗರಿದಂ) ಮೂಲಕ ವಿಶ್ಲೇಷಿಸುತ್ತದೆ. ಆ್ಯಪಲ್​ ಉಪಕರಣಗಳ​ ಬಳಕೆದಾರರಿಂದ ಎಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ವಿವರಗಳನ್ನು ಫೇಸ್​ಬುಕ್ ಈವರೆಗೂ ಬಿಟ್ಟುಕೊಟ್ಟಿಲ್ಲ.

ಈಗಿನಂತೆಯೇ ಮುಂದೆಯೂ ಕಿರು ಉದ್ದಿಮೆಗಳಿಗೆ ನೆರವಾಗುವ ನೀತಿಗಳನ್ನೇ ನಾವು ಹೊಂದಿರುತ್ತೇವೆ ಎಂದು ಫೇಸ್​ಬುಕ್ ತಿಳಿಸಿದೆ. ತನ್ನ ಆದಾಯದ ಒಟ್ಟು ಶೇ 98ರಷ್ಟು ಭಾಗವನ್ನು ಟಾರ್ಗೆಟ್ ಆಡಿಯೆನ್ಸ್​ಗೆ ಜಾಹೀರಾತು ತಲುಪಿಸುವುದರಿಂದಲೇ ಪಡೆಯುವ ಫೇಸ್​ಬುಕ್, ಇದಕ್ಕೆ ಪ್ರತಿಯಾಗಿ ವಿವಿಧ ಸೇವೆಗಳನ್ನು ಉಚಿತವಾಗಿ ಒದಗಿಸುವ ಬಗ್ಗೆ ಪ್ರಸ್ತಾಪಿಸುತ್ತಿದೆ.

ಆದರೆ ಆ್ಯಪಲ್ ಕಂಪನಿ ಮಾತ್ರ ತನ್ನ ಬಳಕೆದಾರರಿಗೆ ಫೇಸ್​ಬುಕ್​ನಿಂದ ಸಿಗಬಹುದಾದ ಉಳಿದೆಲ್ಲಾ ಅನುಕೂಲಗಳಿಗಿಂತ ಬಳಕೆದಾರರ ದತ್ತಾಂಶ ಸೋರಿಕೆ ತಡೆಯುವುದೇ ಆದ್ಯತೆ ಎಂಬ ನಿಲುವು ತಳೆದಿದೆ. ‘ತಮ್ಮ ಬಗ್ಗೆ ಏನೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ಅದನ್ನು ಹೇಗೆಲ್ಲಾ ಬಳಸಲಾಗುತ್ತದೆ ಎಂದು ತಿಳಿಯುವ ಹಕ್ಕು ಬಳಕೆದಾರರಿಗೆ ಇದೆ. ಫೇಸ್​ಬುಕ್​ ಇನ್ನು ಮುಂದೆಯೂ ಆ್ಯಪ್​ಗಳಲ್ಲಿ, ವೆಬ್​ಸೈಟ್​ಗಳಲ್ಲಿ ತನಗೆ ಬೇಕಾದ ಮಾಹಿತಿ ಸಂಗ್ರಹಿಸಬಹುದು. ಆದರೆ ಬಳಕೆದಾರರ ಅನುಮತಿಯನ್ನು ಐಒಎಸ್ 14 ಕಡ್ಡಾಯಗೊಳಿಸುತ್ತದೆ’ ಎಂದು ಆ್ಯಪಲ್ ಕಂಪನಿಯ ಸಿಇಒ ಟಿಮ್​ಕುಕ್ ಟ್ವೀಟ್ ಮಾಡಿದ್ದಾರೆ.

ಫೇಸ್​ಬುಕ್​ ವಿರುದ್ಧ ಅಮೆರಿಕ​ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ

Published On - 8:51 pm, Fri, 18 December 20

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ