AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ

6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ  ಗ್ರೀನ್​ಲ್ಯಾಂಡ್​ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್.

Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ
ಗ್ರೀನ್​ಲ್ಯಾಂಡ್ (ಚಿತ್ರಕೃಪೆ: Jason Briner)
TV9 Web
| Edited By: |

Updated on: Aug 23, 2021 | 8:04 PM

Share

ಹವಾಮಾನ ವೈಪರೀತ್ಯ ಅತ್ಯಂತ ತೀವ್ರತರದಲ್ಲಿ ಬದಲಾಗುತ್ತಿರುವುದು ಪದೇ ಪದೇ ಸಾಬಿತಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಗ್ರೀನ್​ಲ್ಯಾಂಡ್​ ದ್ವೀಪದ ಮಂಜುಗಡ್ಡೆಗಳ ಬಳಿ ಸುರಿದ ಭರ್ಜರಿ ಮಳೆ. ಆರ್ಕಿಟಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳ ನಡುವಿನ ಜಗತ್ತಿನ ಅತ್ಯಂತ ದೊಡ್ಡ ದ್ವೀಪ ಗ್ರೀನ್​ಲ್ಯಾಂಡ್ ಮುಕ್ಕಾಲು ಭಾಗ ಮಂಜುಗಡ್ಡೆಗಳಿಂದಲೇ ಆವೃತವಾಗಿದೆ. ಗ್ರೀನ್​ಲ್ಯಾಂಡ್ ಇಂತಹದ್ದೊಂದು ಮಂಜುಗಡ್ಡೆಯ ಪ್ರದೇಶದಲ್ಲಿ ಕಳೆದ ಶನಿವಾರ ಭರ್ಜರಿ ಮಳೆ ಸುರಿದಿದೆ. ಈ ವಿದ್ಯಮಾನ ಜಗತ್ತಿನಾದ್ಯಂತ ಹಲವರ ತಲ್ಲಣಕ್ಕೆ ಕಾರಣವಾಗಿದೆ.

ಮಳೆ ಚೆನ್ನಾಗಿ ಸುರಿಯುವ ಪ್ರದೇಶದಲ್ಲಿ ಮಳೆ ಬೀಳದೇ ಇದ್ದರೆ ಹೇಗೆ ನಮಗೆ ಚಿಂತೆಯಾಗುತ್ತದೆಯೋ, ಅದೇ ರೀತಿ ಸಹಜವಾಗಿ ಮಳೆ ಸುರಿಯದೇ ಇರುವಲ್ಲಿ ಮಳೆ ಸುರಿದರೂ ಆತಂಕಪಡಬೇಕಿದೆ. ಇದೇ ಕಾರಣಕ್ಕೆ ಗ್ರೀನ್​ಲ್ಯಾಂಡ್ ಸುರಿದ ಮಳೆ ಸದ್ಯದ ಚಿಂತೆಗೆ ಕಾರಣ. ಅಮೆರಿಕದ ರಾಷ್ಟ್ರೀಯ ಹಿಮ ಮತ್ತು ಮಂಜು ಅಧ್ಯಯನ ಕೇಂದ್ರದ ಪ್ರಕಾರ ಗ್ರೀನ್​ಲ್ಯಾಂಡ್ ಮಂಜುಗಡ್ಡೆಗಳ ಮೇಲೆ ಸದ್ಯ ಸುರಿದಿರುವ ಮಳೆ 1950ರ ನಂತರದ ದಾಖಲೆ ಮಳೆ. ಮಳೆಯ ಪ್ರಭಾವ ಮಂಜುಗಡ್ಡೆಗಳ ಮೇಲೂ ಆಗಿದ್ದು ಸಹಜವಾಗಿ ಕರಗುವ ಮಂಜಿನ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚು ಕರಗಿದೆ.

6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ  ಗ್ರೀನ್​ಲ್ಯಾಂಡ್​ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್. 2019ರಲ್ಲಿ ಹವಾಮಾನ ವೈಪರೀತ್ಯದ ಕಾರಣಗಳಿಂದ ಗ್ರೀನ್​ಲ್ಯಾಂಡ್​ನ 532 ಬಿಲಿಯನ್ ಟನ್ ಮಂಜುಗಡ್ಡೆ ಕರಗಿ ಸಮುದ್ರ ಸೇರಿತ್ತು.ಅದೇ ವರ್ಷ ಜಾಗರಿಕವಾಗಿ ಸಮುದ್ರ ಮಟ್ಟ 1.5 ಮಿಲಿ ಮೀಟರ್​ನಷ್ಟು ಏರಿಕೆಯಾಗಿತ್ತು. ಈಗ ಗ್ರೀನ್​ಲ್ಯಾಂಡ್​ನ ಮಂಜುಗಡ್ಡೆಗಳ ಬಳಿ ದಾಖಲೆ ಪ್ರಮಾಣದ ಮಳೆ ಸುರಿದಿರುವುದು ಸಹ ಹವಾಮಾನ ವೈಪರೀತ್ಯ ಇನ್ನೊಂದು ಮೆಟ್ಟಿಲು ಹತ್ತಿ ನಿಂತಿದೆ ಎಂಬುದಕ್ಕೆ ಉದಾಹರಣೆ ಎನ್ನುತ್ತಿದ್ದಾರೆ ಪರಿಸರ ಪರಿಣಿತರು.

ಇದನ್ನೂ ಓದಿ: 

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

(Greenland Rain first time in the history worries Climate Change)

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ