AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ

6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ  ಗ್ರೀನ್​ಲ್ಯಾಂಡ್​ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್.

Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ
ಗ್ರೀನ್​ಲ್ಯಾಂಡ್ (ಚಿತ್ರಕೃಪೆ: Jason Briner)
TV9 Web
| Edited By: |

Updated on: Aug 23, 2021 | 8:04 PM

Share

ಹವಾಮಾನ ವೈಪರೀತ್ಯ ಅತ್ಯಂತ ತೀವ್ರತರದಲ್ಲಿ ಬದಲಾಗುತ್ತಿರುವುದು ಪದೇ ಪದೇ ಸಾಬಿತಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಗ್ರೀನ್​ಲ್ಯಾಂಡ್​ ದ್ವೀಪದ ಮಂಜುಗಡ್ಡೆಗಳ ಬಳಿ ಸುರಿದ ಭರ್ಜರಿ ಮಳೆ. ಆರ್ಕಿಟಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳ ನಡುವಿನ ಜಗತ್ತಿನ ಅತ್ಯಂತ ದೊಡ್ಡ ದ್ವೀಪ ಗ್ರೀನ್​ಲ್ಯಾಂಡ್ ಮುಕ್ಕಾಲು ಭಾಗ ಮಂಜುಗಡ್ಡೆಗಳಿಂದಲೇ ಆವೃತವಾಗಿದೆ. ಗ್ರೀನ್​ಲ್ಯಾಂಡ್ ಇಂತಹದ್ದೊಂದು ಮಂಜುಗಡ್ಡೆಯ ಪ್ರದೇಶದಲ್ಲಿ ಕಳೆದ ಶನಿವಾರ ಭರ್ಜರಿ ಮಳೆ ಸುರಿದಿದೆ. ಈ ವಿದ್ಯಮಾನ ಜಗತ್ತಿನಾದ್ಯಂತ ಹಲವರ ತಲ್ಲಣಕ್ಕೆ ಕಾರಣವಾಗಿದೆ.

ಮಳೆ ಚೆನ್ನಾಗಿ ಸುರಿಯುವ ಪ್ರದೇಶದಲ್ಲಿ ಮಳೆ ಬೀಳದೇ ಇದ್ದರೆ ಹೇಗೆ ನಮಗೆ ಚಿಂತೆಯಾಗುತ್ತದೆಯೋ, ಅದೇ ರೀತಿ ಸಹಜವಾಗಿ ಮಳೆ ಸುರಿಯದೇ ಇರುವಲ್ಲಿ ಮಳೆ ಸುರಿದರೂ ಆತಂಕಪಡಬೇಕಿದೆ. ಇದೇ ಕಾರಣಕ್ಕೆ ಗ್ರೀನ್​ಲ್ಯಾಂಡ್ ಸುರಿದ ಮಳೆ ಸದ್ಯದ ಚಿಂತೆಗೆ ಕಾರಣ. ಅಮೆರಿಕದ ರಾಷ್ಟ್ರೀಯ ಹಿಮ ಮತ್ತು ಮಂಜು ಅಧ್ಯಯನ ಕೇಂದ್ರದ ಪ್ರಕಾರ ಗ್ರೀನ್​ಲ್ಯಾಂಡ್ ಮಂಜುಗಡ್ಡೆಗಳ ಮೇಲೆ ಸದ್ಯ ಸುರಿದಿರುವ ಮಳೆ 1950ರ ನಂತರದ ದಾಖಲೆ ಮಳೆ. ಮಳೆಯ ಪ್ರಭಾವ ಮಂಜುಗಡ್ಡೆಗಳ ಮೇಲೂ ಆಗಿದ್ದು ಸಹಜವಾಗಿ ಕರಗುವ ಮಂಜಿನ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚು ಕರಗಿದೆ.

6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ  ಗ್ರೀನ್​ಲ್ಯಾಂಡ್​ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್. 2019ರಲ್ಲಿ ಹವಾಮಾನ ವೈಪರೀತ್ಯದ ಕಾರಣಗಳಿಂದ ಗ್ರೀನ್​ಲ್ಯಾಂಡ್​ನ 532 ಬಿಲಿಯನ್ ಟನ್ ಮಂಜುಗಡ್ಡೆ ಕರಗಿ ಸಮುದ್ರ ಸೇರಿತ್ತು.ಅದೇ ವರ್ಷ ಜಾಗರಿಕವಾಗಿ ಸಮುದ್ರ ಮಟ್ಟ 1.5 ಮಿಲಿ ಮೀಟರ್​ನಷ್ಟು ಏರಿಕೆಯಾಗಿತ್ತು. ಈಗ ಗ್ರೀನ್​ಲ್ಯಾಂಡ್​ನ ಮಂಜುಗಡ್ಡೆಗಳ ಬಳಿ ದಾಖಲೆ ಪ್ರಮಾಣದ ಮಳೆ ಸುರಿದಿರುವುದು ಸಹ ಹವಾಮಾನ ವೈಪರೀತ್ಯ ಇನ್ನೊಂದು ಮೆಟ್ಟಿಲು ಹತ್ತಿ ನಿಂತಿದೆ ಎಂಬುದಕ್ಕೆ ಉದಾಹರಣೆ ಎನ್ನುತ್ತಿದ್ದಾರೆ ಪರಿಸರ ಪರಿಣಿತರು.

ಇದನ್ನೂ ಓದಿ: 

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

(Greenland Rain first time in the history worries Climate Change)

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್