AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಸಂಸ್ಥೆಯಲ್ಲಿ ರಷ್ಯಾ ಕ್ರಮ ಖಂಡಿಸುವ ಮತದಾನದಿಂದ ಭಾರತ ದೂರ ಉಳಿದದ್ದು ನಿರಾಶದಾಯಕ: ಅಮೆರಿಕ ಸೆನೆಟ್ ಸದಸ್ಯ

‘ಮೊದಲಿಗೆ ವ್ಲಾದಿಮಿರ್ ಪುಟಿನ್ ಮತ್ತು ರಷ್ಯಾದ ಸರ್ಕರವನ್ನು ಹೊಣೆಗಾರನ್ನಾಗಿ ಮಾಡಬೇಕಿದೆ. ನಿರ್ಬಂಧ ಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಕುಣಿಕೆಯನ್ನು ಬಿಗಿಗೊಳಿಸುತ್ತೇವೆ, ಈ ಕೆಲಸ ನಾವಿನ್ನೂ ಆರಂಭಿಸಿಲ್ಲ,’ ಎಂದು ಫಿಜ್ ಪ್ಯಾಟ್ರಿಕ್ ಹೇಳಿದರು.

ವಿಶ್ವಸಂಸ್ಥೆಯಲ್ಲಿ ರಷ್ಯಾ ಕ್ರಮ ಖಂಡಿಸುವ ಮತದಾನದಿಂದ ಭಾರತ ದೂರ ಉಳಿದದ್ದು ನಿರಾಶದಾಯಕ: ಅಮೆರಿಕ ಸೆನೆಟ್ ಸದಸ್ಯ
ಯುದ್ಧದಲ್ಲಿ ಹಾಳಾಗಿರುವ ಉಕ್ರೇನ್ ಪಟ್ಟಣಗಳು
TV9 Web
| Edited By: |

Updated on: Apr 08, 2022 | 6:21 AM

Share

ವಾಷಿಂಗ್ಟನ್:  ಉಕ್ರೇನ್ ವಿರುದ್ಧ ರಷ್ಯಾದ ಸೇನೆ ನಡೆಸಿರುವ ಆಕ್ರಮಣದ ಮೇಲೆ ವಿಶ್ವಸಂಸ್ಥೆಯಲ್ಲಿ ನಡೆದ ವೋಟಿಂಗ್ ನಲ್ಲಿ ಇಂಡಿಯ (India) ಭಾಗವಹಿಸದಿರುವುದು ತೀವ್ರ ಸ್ವರೂಪದ ನಿರಾಶೆಯನ್ನುಂಟು ಮಾಡಿದೆ ಎಂದು ಯುಎಸ್ ಕಾಂಗ್ರೆಸ್ ಸದಸ್ಯರೊಬ್ಬರು ಗುರುವಾರ ವಾಷಿಂಗ್ಟನ್ ನಲ್ಲಿ ಹೇಳಿದ್ದಾರೆ. ಪೆನ್ ಸಿಲ್ವೇನಿಯಾದ (Pennsylvania) ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯರಾಗಿರುವ ಬ್ರಿಯಾನ್ ಫಿಜ್ ಪ್ಯಾಟ್ರಿಕ್ (Brian Fitzpatrick) ಅವರು, ರಷ್ಯಾದೆಡೆ ತಮ್ಮ ಒಲವು ಪ್ರಕಟಿಸುತ್ತಿರುವ ದೇಶಗಳನ್ನು ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆ ಈಗ ತಲೆದೋರಿದೆ ಎಂದು ಸಿ ಎನ್ ಎನ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಿನ್ನೆಯಷ್ಟೇ ನಾನು ಇಂಡಿಯಾದ ರಾಯಭಾರಿ ಅವರನ್ನು ಭೇಟಿಯಾಗಿ ವಿಶ್ವಸಂಸ್ಥೆಯಲ್ಲಿ ನಡೆದ ವೋಟಿಂಗ್ ನಲ್ಲಿ ಭಾರತ ಗೈರುಹಾಜರಾಗಿದ್ದ ಸಂಗತಿಯನ್ನು ಪ್ರಸ್ತಾಪಿಸಿದೆ. ಭಾರತದ ಈ ನಡೆಯಿಂದ ನಮಗೆ ಬಹಳ ನಿರಾಶೆಯಾಗಿದೆ,’ ಎಂದು ಹೇಳಿದ ಬ್ರಿಯಾನ್ ಫಿಜ್ ಪ್ಯಾಟ್ರಿಕ್ ಅವರು ವಾಷಿಂಗ್ಟನ್ ನಲ್ಲಿ ಭಾರತದ ರಾಯಭಾರಿ ತರಣ್ ಜಿತ್ ಸಿಂಗ್ ಸಂಧು ಅವರನ್ನು ಭೇಟಿಯಾದ ವಿಷಯವನ್ನು ಉಲ್ಲೇಖಿಸಿದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಜಾರಿಯಲ್ಲಿರುವ ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಕಠಿಣ ನಿಲುವು ತಳೆಯಲು ಹಿಂಜರಿಯುತ್ತಿರುವ ದೇಶಗಳ ಬಗ್ಗೆ ಅಮೇರಿಕಾ ಏನು ಭಾವಿಸುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಫಿಜ್ ಪ್ಯಾಟ್ರಿಕ್ ಅವರು, ‘ಈಗ ತಲೆದೋರಿರುವ ಸ್ಥಿತಿಗೆ ಅವರನ್ನು ಹೊಣೆಗಾರನ್ನಾಗಿ ಮಾಡುವುದು,’ ಅಂತ ಹೇಳಿ, ‘ಗುರುವಾರ ಬೆಳಗ್ಗೆ ನಮಗೆ ಲಭ್ಯವಾಗಿರುವ ವರದಿಯ ಪ್ರಕಾರ ರಷ್ಯಾ ವಿರುದ್ಧ ಸಂಪೂರ್ಣ ತೈಲ ನಿಷೇಧ ಹೇರಲು ಜರ್ಮನಿ ಹಿಂಜರಿಯುತ್ತಿದೆ,’ ಎಂದರು.

‘ಮೊದಲಿಗೆ ವ್ಲಾದಿಮಿರ್ ಪುಟಿನ್ ಮತ್ತು ರಷ್ಯಾದ ಸರ್ಕರವನ್ನು ಹೊಣೆಗಾರನ್ನಾಗಿ ಮಾಡಬೇಕಿದೆ. ನಿರ್ಬಂಧ ಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಕುಣಿಕೆಯನ್ನು ಬಿಗಿಗೊಳಿಸುತ್ತೇವೆ, ಈ ಕೆಲಸ ನಾವಿನ್ನೂ ಆರಂಭಿಸಿಲ್ಲ,’ ಎಂದು ಫಿಜ್ ಪ್ಯಾಟ್ರಿಕ್ ಹೇಳಿದರು.

ಎರಡನೇಯದಾಗಿ, ನಾವು ಮಾಡದಿರುವ ಮತ್ತೊಂದು ಕೆಲಸವಿದೆ. ಅದೇನೆಂದರೆ, ಉಕ್ರೇನ್ ಜನರಿಗೆ ಅಗತ್ಯವಿರುವ ಎಲ್ಲ ರಕ್ಷಣಾ ಸಾಮಗ್ರಿಗಳನ್ನು ಒದಗಿಸುವುದು, ಆದಷ್ಟು ಬೇಗ ಈ ಕೆಲಸವನ್ನೂ ಆರಂಭಿಸುತ್ತೇವೆ,’ ಎಂದು ಫಿಜ್ ಪ್ಯಾಟ್ರಿಕ್ ತಮ್ಮ ಸಂದರ್ಶನದಲ್ಲಿ ಹೇಳಿದರು.

ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚಣೆ ಆರಂಭಿಸಿದ ಬಳಿಕ ತುರ್ತಾಗಿ ಒಂದು ಸ್ವತಂತ್ರ ಅಂತರರಾಷ್ಟ್ರೀಯ ಆಯೋಗ ಸ್ಥಾಪಿಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ ನಲ್ಲಿ ನಡೆದ ವೋಟಿಂಗ್ ನಲ್ಲಿ ಭಾರತ ಭಾಗವಹಿಸದೆ ಹಿಂತೆಗೆದಿತ್ತು.

ವಿಶ್ವಸಂಸ್ಥೆಯ 15-ರಾಷ್ಟ್ರಗಳ ಭದ್ರತಾ ಮಂಡಳಿ ತೆಗೆದುಕೊಂಡು ಎರಡು ನಿರ್ಣಯಗಳಲ್ಲಿ ಮತ್ತು 193-ಸದಸ್ಯ ರಾಷ್ಟ್ರಗಳ ಸಾಮಾನ್ಯ ಸಭೆ ತೆಗೆದುಕೊಂಡ ಒಂದು ನಿರ್ಣಯದಲ್ಲಿ ಭಾರತ ಭಾಗಿಯಾಗಿರಲಿಲ್ಲ.

ಇದನ್ನೂ ಓದಿ:  ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ