AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ಚೀನಾದ ಸಹಾಯ ಕೋರಿದ ರಷ್ಯಾ; ಭಾರತದಲ್ಲಿ ಹೆಚ್ಚಿದ ಆತಂಕ

ಒಂದುವೇಳೆ ರಷ್ಯಾದ ಮನವಿಯಂತೆ ಚೀನಾ ಸೇನೆ ರಷ್ಯಾಗೆ ಸಹಕಾರ ನೀಡಿದರೆ ಚೀನಾದ ಮೇಲೂ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.

Russia-Ukraine War: ಚೀನಾದ ಸಹಾಯ ಕೋರಿದ ರಷ್ಯಾ; ಭಾರತದಲ್ಲಿ ಹೆಚ್ಚಿದ ಆತಂಕ
ರಷ್ಯಾ- ಉಕ್ರೇನ್ ದಾಳಿ
TV9 Web
| Edited By: |

Updated on: Mar 14, 2022 | 1:24 PM

Share

ಕೀವ್​: ಉಕ್ರೇನ್ ಮೇಲೆ ರಷ್ಯಾದ ಯುದ್ಧ ಮುಂದುವರೆದಿದ್ದು, ಎರಡೂ ರಾಷ್ಟ್ರಗಳ ಸೇನಾ ಪಡೆ, ಪ್ರಜೆಗಳು, ಕಟ್ಟಡಗಳು, ಆಸ್ಪತ್ರೆಗಳು ಧ್ವಂಸವಾಗಿವೆ. ಇದರ ನಡುವೆ ರಷ್ಯಾ ಉಕ್ರೇನ್ (Ukraine) ವಿರುದ್ಧ ದಾಳಿ ಮುಂದುವರೆಸಲು ಚೀನಾದ ಸಹಾಯ ಕೇಳಿದೆ. ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಲು ಚೀನಾದ ಮಿಲಿಟರಿ ಉಪಕರಣಗಳನ್ನು ರಷ್ಯಾ (Russia) ಕೇಳಿದೆ ಎಂದು ಅಮೆರಿಕ (United States) ಆರೋಪ ಮಾಡಿದೆ. ಸುಮಾರು 20 ದಿನಗಳ ಹಿಂದೆ ಉಕ್ರೇನ್-ರಷ್ಯಾ ನಡುವಿನ ಯುದ್ಧ ಪ್ರಾರಂಭವಾಗಿದೆ. ಒಂದುವೇಳೆ ರಷ್ಯಾದ ಮನವಿಯಂತೆ ಚೀನಾ ಸೇನೆ ರಷ್ಯಾಗೆ ಸಹಕಾರ ನೀಡಿದರೆ ಚೀನಾದ ಮೇಲೂ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ.

ಉಕ್ರೇನ್‌ನ ರಷ್ಯಾದ ಆಕ್ರಮಣದ ಮೇಲೆ ಅಮೆರಿಕದ ಗುಪ್ತಚರ ಇಲಾಖೆ ಕಣ್ಣಿಟ್ಟಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬೀಜಿಂಗ್‌ನಲ್ಲಿ ಯಾವ ಹಾರ್ಡ್‌ವೇರ್ ಸಹಾಯವನ್ನು ಬಯಸಿದ್ದಾರೆಂದು ವಾಷಿಂಗ್ಟನ್‌ಗೆ ಖಚಿತವಾಗಿ ಗೊತ್ತಾಗಿದೆ. ರಷ್ಯಾ ಚೀನಾದ ಹಾರ್ಡ್​ವೇರ್ ಸಹಾಯ ಕೋರಿದೆ ಎಂದು ಅಮೆರಿಕ ತಿಳಿಸಿದೆ. ಈ ಗಲಾಟೆಯಿಂದಾಗಿ ರಷ್ಯಾದ ಪಡೆಗಳು ಸರಬರಾಜು, ಬಿಡಿಭಾಗಗಳು ಮತ್ತು ತೈಲದಿಂದ ಹೊರಗುಳಿಯುತ್ತಿವೆ. ಅಲ್ಲದೆ, ಚೀನಾ ಆಗಾಗ ಭಾರತದ ಗಡಿಯಲ್ಲಿ ತಗಾದೆ ತೆಗೆಯುತ್ತಲೇ ಇದೆ. ಈಗ ಭಾರತದ ಗೆಳೆಯನಾಗಿರುವ ರಷ್ಯಾ ಮತ್ತು ಚೀನಾ ಒಟ್ಟಾಗಿ ಕೈ ಜೋಡಿಸಿದರೆ ಅದು ಭಾರತಕ್ಕೆ ಅಪಾಯದ ಮುನ್ಸೂಚನೆ ಎಂಬುದು ನರೇಂದ್ರ ಮೋದಿ ಸರ್ಕಾರಕ್ಕೆ ತಲೆನೋವು ತಂದಿಟ್ಟಿದೆ.

ಭಾರತ ಇನ್ನೂ ಮಿಲಿಟರಿ ಬಿಡಿಭಾಗಗಳು ಮತ್ತು ಮೂರು ಸೇವೆಗಳಲ್ಲಿ ತನ್ನ ಮುಂಚೂಣಿಯಲ್ಲಿರುವ ರಷ್ಯಾದ ಮೂಲದ ಉಪಕರಣಗಳ ಮೇಲೆ ಅವಲಂಬಿತವಾಗಿದೆ. ರಷ್ಯಾದ T-90 ಟ್ಯಾಂಕ್‌ಗಳು, Su-30MKI ಫೈಟರ್‌ಗಳು ಮತ್ತು INS ವಿಕ್ರಮಾದಿತ್ಯ ಏರ್​ಕ್ರಾಫ್ಟ್​ ಕ್ಯಾರಿಯರ್ ಮಾಸ್ಕೋ ಮೂಲದ ಮೂಲ ಉಪಕರಣ ತಯಾರಕರ ಮೇಲೆ ಅವಲಂಬಿತವಾಗಿವೆ. ರಷ್ಯಾದ ಮೇಲೆ ಭಾರೀ ಪ್ರಮಾಣದ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಹೇರಲಾಗಿರುವುದು ಭಾರತದ ಭಯಕ್ಕೆ ಕಾರಣವಾಗಿದೆ.

ರಷ್ಯಾದ ಪರವಾಗಿ ಚೀನಾ ಸುಳ್ಳು ಸುದ್ದಿಯನ್ನು ಹರಡುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಅಮೆರಿಕ ಆರೋಪ ಮಾಡಿದೆ. ಉಕ್ರೇನ್​ನಲ್ಲಿ ರಷ್ಯಾ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಬಳಸಲು ಸಹಾಯವಾಗುವಂತೆ ಚೀನಾ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಆರೋಪಿಸಲಾಗಿದೆ. ಉಕ್ರೇನ್ ಮೇಲೆ ಯುದ್ಧ ಸಾರಿದ ಬೆನ್ನಲ್ಲೇ ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅದರಿಂದ ಪಾರಾಗಲು ಚೀನಾ ರಷ್ಯಾಗೆ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಭಾರತೀಯ ರಾಜತಾಂತ್ರಿಕತೆ ರಷ್ಯಾ- ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರ ಬ್ಯಾಟಿಂಗ್ ಮಾಡುತ್ತಿದ್ದರೂ, ಮಾಸ್ಕೋದಲ್ಲಿ ತನ್ನ ತಟಸ್ಥ ಸ್ಥಾನವನ್ನು ಬದಲಾಯಿಸಲು ನವದೆಹಲಿ ತನ್ನ ಕ್ಯುಎಡಿ ಪಾಲುದಾರರಿಂದ ಗಂಭೀರ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಫ್ರಾನ್ಸ್‌ಗೆ ತನ್ನ ನಿಲುವನ್ನು ವಿವರಿಸಿದ ನಂತರ ಭಾರತವು ತನ್ನ ನಿಲುವಿನ ಬಗ್ಗೆ ಯುರೋಪಿನಲ್ಲಿ ಯಾರಿಗೂ ಉತ್ತರಿಸಬೇಕಾಗಿಲ್ಲ. ಏಕೆಂದರೆ ಇಂಗ್ಲೆಂಡ್ ಮತ್ತು ಜರ್ಮನಿಯಂತಹ ಯುರೋಪಿಯನ್ ಶಕ್ತಿಗಳು 2020ರ ಮೇಯಲ್ಲಿ ಚೀನಾದ ಸೈನ್ಯವು ಲಡಾಖ್‌ಗೆ ಪ್ರವೇಶಿಸಿದಾಗ ಏನೂ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದವು.

ಆದರೆ, ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ಆತ್ಮನಿರ್ಭರ್ ಭಾರತ್ ಅಜೆಂಡಾವನ್ನು ಪ್ರಚುರಪಡಿಸುತ್ತಿದ್ದರೂ ಅದು ಕಾರ್ಯರೂಪಕ್ಕೆ ಬರಲು ಬಹಳ ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೇರೆ ದೇಶಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯವಾಗಿದೆ. ಈ ಎಲ್ಲ ಕಾರಣಗಳಿಂದ ರಷ್ಯಾ- ಉಕ್ರೇನ್ ನಡುವಿನ ಯುದ್ಧದಿಂದ ಭಾರತದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ರಷ್ಯಾ ದಾಳಿಕೋರರ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಉಕ್ರೇನ್: ಅಮೆರಿಕ ಕಂಪನಿಗಳಿಂದ ನೆರವು

Russia Ukraine War Live: ಎರಡು ದೇಶದ ಮಧ್ಯೆ ಇಂದು ನಾಲ್ಕನೇ ಸುತ್ತಿನ‌ ಶಾಂತಿ ಮಾತುಕತೆ; ಉಕ್ರೇನ್ ಮುಂದೆ ಕೆಲ ಬೇಡಿಕೆಯಿಟ್ಟ ರಷ್ಯಾ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು