AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ

ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ
ಗೀತಾಂಜಲಿ ರಾವ್
shruti hegde
| Edited By: |

Updated on:Dec 04, 2020 | 12:49 PM

Share

ನ್ಯೂಯಾರ್ಕ್: ಭಾರತ ಮೂಲದ ಯುವ ವಿಜ್ಞಾನಿ ಮತ್ತು ಸಂಶೋಧಕಿ ಗೀತಾಂಜಲಿ ರಾವ್​ ಅವರನ್ನು ಕಿಡ್​ ಆಫ್ ದಿ ಇಯರ್ ಎಂದು ಟೈಮ್ಸ್​ ನಿಯತಕಾಲಿಕೆ ಗುರುತಿಸಿದೆ. ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಈ ಪುರಸ್ಕಾರಕ್ಕೆ 5,000ಕ್ಕೂ ಹೆಚ್ಚು ಮಂದಿ ನಾಮ ನಿರ್ದೇಶನಗೊಂಡಿದ್ದರು. ಪ್ರಸಿದ್ಧ ನಟಿ ಎಂಜಲಿನಾ ಜೋಲಿ ಇವರನ್ನು ಸಂದರ್ಶನ ಮಾಡಿದ್ದರು. ಅಮೇರಿಕ ಕೊಲೊರಾಡೋದಲ್ಲಿನ ತಮ್ಮ ಮನೆಯಿಂದ ವರ್ಚುವಲ್ ವಿಧಾನದಲ್ಲಿ ಗೀತಾಂಜಲಿ ರಾವ್​ ಅವರನ್ನು ಸಂದರ್ಶನ ಮಾಡಲಾಯಿತು.

ಕಲುಷಿತ ನೀರಿನಿಂದ ಹಿಡಿದು, ಸೈಬರ್ ಬೆದರಿಕೆಯವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯ ಬಗೆಗಿನ ತಮ್ಮ ಆವಿಷ್ಕಾರಗಳ ಬಗ್ಗೆ ಗೀತಾಂಜಲಿ ಮಾತನಾಡಿದರು. ಸಮಸ್ಯೆಗಳನ್ನು ಪರಿಹರಿಸಲೆಂದು ವಿಶ್ವದ ವಿವಿಧ ದೇಶಗಳಲ್ಲಿ ಆವಿಷ್ಕಾರದ ಮನಃಸ್ಥಿತಿಯಿರುವ ಯುವಪಡೆಯನ್ನು ಒಗ್ಗೂಡಿಸುವ ತಮ್ಮ ಧ್ಯೇಯದ ಬಗ್ಗೆಯೂ ಅವರು ಸಂದರ್ಶನದಲ್ಲಿ ಮಾತನಾಡಿದರು.

ನಾನು ಸಾಧಿಸಿದ್ದೇನೆ ಎಂದಾದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಜಾಗತಿಕ ಮಟ್ಟದಲ್ಲಿ ನಾವು ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಾಂಕ್ರಾಮಿಕದ ಮಧ್ಯೆ ಕುಳಿತಿದ್ದೇವೆ. ಮಾನವ ಹಕ್ಕುಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಮಸ್ಯೆಗಳನ್ನು ಹುಟ್ಟುಹಾಕುವ ಬದಲು, ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಿದೆ. ಅದು ಹವಾಮಾನ ಬದಲಾವಣೆ ಅಥವಾ ಸೈಬರ್ ಬೆದರಿಕೆ ಕುರಿತಾಗಿಯೂ ಆಗಿರಬಹುದು ಎಂದು ಹೇಳಿದರು.

ಸಮಸ್ಯೆಯು ಚಿಕ್ಕದೇ ಆಗಿರಬಹುದು. ನಿರ್ದಿಷ್ಟ ವಿಷಯದ ಕುರಿತು ಗಮನ ಕೇಂದ್ರೀಕರಿಸಿ, ಚಿಂತನೆ ನಡೆಸಿ, ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ, ನಂತರ ನೀವು ಕಂಡುಕೊಂಡಿದ್ದನ್ನು ಜಗತ್ತಿಗೆ ತಿಳಿಸಿ. ನಾವು ವಾಸಿಸುವ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯಿದ್ದರೆ, ನಾವು ಸಕಾರಾತ್ಮಕ ಗುಣಗಳನ್ನು ಹೊಂದಿರುತ್ತೇವೆ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ನಾನು 2ನೇ ತರಗತಿ ಇದ್ದಾಗಿನಿಂದಲೇ ಯೋಚಿಸಲು ಆರಂಭಿಸಿದೆ. ಡೆನ್ವರ್ ವಾಟರ್ಕ್ವಾಲಿಟಿ ರಿಸರ್ಚ್ ಲ್ಯಾಬ್​ನಲ್ಲಿ ಕಾರ್ಬನ್ ನ್ಯಾನೊಟ್ಯೂಬ್ ಸೆನ್ಸರ್ ತಂತ್ರಜ್ಞಾನವನ್ನು ಸಂಶೋಧಿಸಲು ಬಯಸುತ್ತೇನೆ ಎಂದು ಪೋಷರಿಗೆ ಹೇಳುವಾಗ ನನಗೆ 10 ವರ್ಷವಾಗಿತ್ತು ಎಂದು ಗೀತಾಂಜಲಿ ರಾವ್ ನೆನಪಿಸಿಕೊಂಡರು.

Published On - 12:48 pm, Fri, 4 December 20

Follow Us
shruti hegde
shruti hegde
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​