AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ

ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಭಾರತ ಮೂಲದ ಯುವ ವಿಜ್ಞಾನಿ ಗೀತಾಂಜಲಿ ರಾವ್​ಗೆ ‘ಕಿಡ್ ಆಫ್​ ದಿ ಇಯರ್’ ಗೌರವ
ಗೀತಾಂಜಲಿ ರಾವ್
shruti hegde
| Edited By: |

Updated on:Dec 04, 2020 | 12:49 PM

Share

ನ್ಯೂಯಾರ್ಕ್: ಭಾರತ ಮೂಲದ ಯುವ ವಿಜ್ಞಾನಿ ಮತ್ತು ಸಂಶೋಧಕಿ ಗೀತಾಂಜಲಿ ರಾವ್​ ಅವರನ್ನು ಕಿಡ್​ ಆಫ್ ದಿ ಇಯರ್ ಎಂದು ಟೈಮ್ಸ್​ ನಿಯತಕಾಲಿಕೆ ಗುರುತಿಸಿದೆ. ಕಲುಷಿತ ಕುಡಿಯುವ ನೀರು ಮತ್ತು ಸೈಬರ್ ಬೆದರಿಕೆಯ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಬೆರಗುಗೊಳಿಸುವ ಉತ್ತರ ಹುಡುಕಿದ 15 ವರ್ಷದ ಗೀತಾಂಜಲಿ ರಾವ್​ ಅವರಿಗೆ ಮೊದಲ ವರ್ಷದ ಈ ಗೌರವ ಸಂದಿದೆ.

ಈ ಪುರಸ್ಕಾರಕ್ಕೆ 5,000ಕ್ಕೂ ಹೆಚ್ಚು ಮಂದಿ ನಾಮ ನಿರ್ದೇಶನಗೊಂಡಿದ್ದರು. ಪ್ರಸಿದ್ಧ ನಟಿ ಎಂಜಲಿನಾ ಜೋಲಿ ಇವರನ್ನು ಸಂದರ್ಶನ ಮಾಡಿದ್ದರು. ಅಮೇರಿಕ ಕೊಲೊರಾಡೋದಲ್ಲಿನ ತಮ್ಮ ಮನೆಯಿಂದ ವರ್ಚುವಲ್ ವಿಧಾನದಲ್ಲಿ ಗೀತಾಂಜಲಿ ರಾವ್​ ಅವರನ್ನು ಸಂದರ್ಶನ ಮಾಡಲಾಯಿತು.

ಕಲುಷಿತ ನೀರಿನಿಂದ ಹಿಡಿದು, ಸೈಬರ್ ಬೆದರಿಕೆಯವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯ ಬಗೆಗಿನ ತಮ್ಮ ಆವಿಷ್ಕಾರಗಳ ಬಗ್ಗೆ ಗೀತಾಂಜಲಿ ಮಾತನಾಡಿದರು. ಸಮಸ್ಯೆಗಳನ್ನು ಪರಿಹರಿಸಲೆಂದು ವಿಶ್ವದ ವಿವಿಧ ದೇಶಗಳಲ್ಲಿ ಆವಿಷ್ಕಾರದ ಮನಃಸ್ಥಿತಿಯಿರುವ ಯುವಪಡೆಯನ್ನು ಒಗ್ಗೂಡಿಸುವ ತಮ್ಮ ಧ್ಯೇಯದ ಬಗ್ಗೆಯೂ ಅವರು ಸಂದರ್ಶನದಲ್ಲಿ ಮಾತನಾಡಿದರು.

ನಾನು ಸಾಧಿಸಿದ್ದೇನೆ ಎಂದಾದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಜಾಗತಿಕ ಮಟ್ಟದಲ್ಲಿ ನಾವು ಇನ್ನೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಾಂಕ್ರಾಮಿಕದ ಮಧ್ಯೆ ಕುಳಿತಿದ್ದೇವೆ. ಮಾನವ ಹಕ್ಕುಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಮಸ್ಯೆಗಳನ್ನು ಹುಟ್ಟುಹಾಕುವ ಬದಲು, ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೊಡಬೇಕಿದೆ. ಅದು ಹವಾಮಾನ ಬದಲಾವಣೆ ಅಥವಾ ಸೈಬರ್ ಬೆದರಿಕೆ ಕುರಿತಾಗಿಯೂ ಆಗಿರಬಹುದು ಎಂದು ಹೇಳಿದರು.

ಸಮಸ್ಯೆಯು ಚಿಕ್ಕದೇ ಆಗಿರಬಹುದು. ನಿರ್ದಿಷ್ಟ ವಿಷಯದ ಕುರಿತು ಗಮನ ಕೇಂದ್ರೀಕರಿಸಿ, ಚಿಂತನೆ ನಡೆಸಿ, ಬುದ್ಧಿವಂತಿಕೆಯಿಂದ ವಿಶ್ಲೇಷಿಸಿ, ನಂತರ ನೀವು ಕಂಡುಕೊಂಡಿದ್ದನ್ನು ಜಗತ್ತಿಗೆ ತಿಳಿಸಿ. ನಾವು ವಾಸಿಸುವ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿಯಿದ್ದರೆ, ನಾವು ಸಕಾರಾತ್ಮಕ ಗುಣಗಳನ್ನು ಹೊಂದಿರುತ್ತೇವೆ ಎಂದು ಹೇಳಿದರು.

ಸಾಮಾಜಿಕ ಬದಲಾವಣೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ನಾನು 2ನೇ ತರಗತಿ ಇದ್ದಾಗಿನಿಂದಲೇ ಯೋಚಿಸಲು ಆರಂಭಿಸಿದೆ. ಡೆನ್ವರ್ ವಾಟರ್ಕ್ವಾಲಿಟಿ ರಿಸರ್ಚ್ ಲ್ಯಾಬ್​ನಲ್ಲಿ ಕಾರ್ಬನ್ ನ್ಯಾನೊಟ್ಯೂಬ್ ಸೆನ್ಸರ್ ತಂತ್ರಜ್ಞಾನವನ್ನು ಸಂಶೋಧಿಸಲು ಬಯಸುತ್ತೇನೆ ಎಂದು ಪೋಷರಿಗೆ ಹೇಳುವಾಗ ನನಗೆ 10 ವರ್ಷವಾಗಿತ್ತು ಎಂದು ಗೀತಾಂಜಲಿ ರಾವ್ ನೆನಪಿಸಿಕೊಂಡರು.

Published On - 12:48 pm, Fri, 4 December 20

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?