ಪಿಎಂ ಭಾಷಣ; ವಿಕಸಿತ ಭಾರತಕ್ಕೆ ಜನಸಾಮಾನ್ಯರ ನಿರೀಕ್ಷೆಗಳು

15 Aug 2024

Pic credit: PTI

Vijayasarathy SN

ಕೆಂಪುಕೋಟೆಯಲ್ಲಿ...

Pic credit: PTI

ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ನಿಂತು ತಮ್ಮ 11ನೆ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹುತಾತ್ಮರನ್ನು ಸ್ಮರಿಸಿದರು.

ವಿಕಸಿತ ಭಾರತದ ಗುರಿ

Pic credit: PTI

ಸ್ಕಿಲ್ ಇಂಡಿಯಾದಿಂದ ಹಿಡಿದು ಭ್ರಷ್ಟಾಚಾರ ನಿಗ್ರಹದವರೆಗೆ ವಿವಿಧ ವಿಚಾರಗಳ ಬಗ್ಗೆ ಮೋದಿ ಮಾತನಾಡಿದರು. 2047ರ ವಿಕಸಿತ ಭಾರತದ ಗುರಿ ಸಾಧನೆಗೆ ಜನಸಾಮಾನ್ಯರು ನೀಡಿದ ಸಲಹೆಗಳನ್ನು ಉಲ್ಲೇಖಿಸಿದರು.

ಜನಸಾಮಾನ್ಯರ ನಿರೀಕ್ಷೆಗಳು

Pic credit: PTI

ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿಗಳು ವಿಕಸಿತ ಭಾರತಕ್ಕೆ ಜನಸಾಮಾನ್ಯರು ತಿಳಿಸಿದ ಕೆಲ ಪ್ರಮುಖ ನಿರೀಕ್ಷೆಗಳು ಮತ್ತು ಸಲಹೆಗಳೇನು ಎಂಬ ವಿವರ ಮುಂದಿನ 3 ಸ್ಲೈಡ್​ಗಳಲ್ಲಿವೆ.

ಜನಸಾಮಾನ್ಯರ ನಿರೀಕ್ಷೆ 1

Pic credit: PTI

ಭಾರತವು ವಿಶ್ವದ ಕೌಶಲ್ಯ ಕೇಂದ್ರ ಆಗಬೇಕು. ವಿಶ್ವದ ಶಿಕ್ಷಣ ಕೇಂದ್ರವಾಗಬೇಕು. ಜಾಗತಿಕ ಮಾಧ್ಯಮ ಕೇಂದ್ರವಾಗಬೇಕು. ಮ್ಯಾನುಫ್ಯಾಕ್ಚರಿಂಗ್ ಅಡ್ಡೆಯಾಗಬೇಕು.

ಜನಸಾಮಾನ್ಯರ ನಿರೀಕ್ಷೆ 2

Pic credit: PTI

ಭಾರತ ಆತ್ಮನಿರ್ಭರತೆ ಅಥವಾ ಸ್ವಾವಲಂಬನೆ ಸಾಧಿಸಬೇಕು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಬೇಕು. ಆರೋಗ್ಯಕಾಳಜಿಯಲ್ಲಿ ಉನ್ನತಿ ಸಾಧಿಸಬೇಕು.

ಜನಸಾಮಾನ್ಯರ ನಿರೀಕ್ಷೆ 3

Pic credit: PTI

ಆಡಳಿತ ಮತ್ತು ನ್ಯಾಯಾಂಗ ಸುಧಾರಣೆಗಳಾಗಬೇಕು. ಸ್ವಂತ ಬಾಹ್ಯಾಕಾಶ ಕೇಂದ್ರ ಹೊಂದಿರಬೇಕು. ಹಸಿರುಹೊದಿಕೆಯ ನಗರಗಳ ಸಂಖ್ಯೆ ಹೆಚ್ಚಾಗಬೇಕು. ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಕ್ಷಮತೆ ಹೆಚ್ಚಬೇಕು.

ಮೋದಿ ಭಾಷಣ

Pic credit: PTI

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ವಿಕಸಿತ ಭಾರತದ ಗುರಿಸಾಧನೆ ಈಡೇರಿಕೆಗೆ ಮೇಲಿನ ಜನಸಾಮಾನ್ಯರ ಸಲಹೆಗಳನ್ನು ವ್ಯಕ್ತಪಡಿಸಿದರು.