ಚಿಕ್ಕಮಗಳೂರು ಜಿಲ್ಲೆಯ ಗಗನ್​​ (ರೇಸ್​​ ಎತ್ತು) ಇನ್ನಿಲ್ಲ  

26 ನವೆಂಬರ್  2023

ಕೆಂಪನಹಳ್ಳಿಯ ಜಗದೀಶ್ ಎಂಬುವರು ಏಳು ಲಕ್ಷ ರೂ. ಕೊಟ್ಟು ಹಳ್ಳಿಕಾರ್ ತಳಿಯ ಎತ್ತನ್ನು ತಂದಿದ್ದರು. ಈ ಎತ್ತಿಗೆ ಗಗನ್​ ಎಂದು ನಾಮಕರಣ ಮಾಡಿದ್ದರು.

ಜಗದೀಶ್ ಎಂಬುವರಿಗೆ ಸೇರಿದ ಗಗನ್  

ಜಗದೀಶ್ ಗಗನ್​​ (ಎತ್ತು) ಅನ್ನು ಸ್ಪರ್ಧೆಗಾಗಿಯೇ ಮನೆ ಮಕ್ಕಳಂತೆ ಸಾಕಿದ್ದರು. ಗಗನ್​ ರಾಜ್ಯದಲ್ಲಿ ಎಲ್ಲೇ ಸ್ಪರ್ಧೆ ನಡೆದರು ಭಾಗವಹಿಸುತ್ತಿದ್ದನು.  

ಮನೆ ಮಕ್ಕಳಂತೆ ಗಗನ್​​ನನ್ನು ಸಾಕಿದ್ದ ಜಗದೀಶ್ 

ಗಗನ್ ರೇಸ್ ಟ್ರ್ಯಾಕ್‍ನಲ್ಲಿ ಓಡೋಕೆ ನಿಂತರೆ ಚಿರತೆ. 90 ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದೆ. 15 ಲಕ್ಷ ರೂ. ಬಹುಮಾನ ಗೆದ್ದಿದ್ದನು. ಜೊತೆಗೆ 1 ಬೈಕ್ , 50 ಗ್ರಾಂ ಚಿನ್ನವನ್ನೂ ಗೆದ್ದಿದೆ. 

15 ಲಕ್ಷ ರೂ. ಬಹುಮಾನ ಗೆದ್ದಿದ್ದ ಗಗನ್​ 

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಕೆಂಪನಹಳ್ಳಿಯಲ್ಲಿ ಗಗನ್​​ ಮೃತಪಟ್ಟಿದ್ದಾನೆ. 

ಕೆಂಪನಹಳ್ಳಿಯಲ್ಲಿ ಮೃತಪಟ್ಟ ಗಗನ್​​  

ರಾಜ್ಯಾದ್ಯಂತ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಗನ್​ಗೆ ಅಪಾರ ಅಭಿಮಾನಿಗಳಿದ್ದರು. ಅಂತಿಮ ದರ್ಶನಕ್ಕೆ ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಜನರು ಬಂದಿದ್ದರು.  

ಅಪಾರ ಅಭಿಮಾನಿಗಳನ್ನು  ಹೊಂದಿದ್ದ ಗಗನ್​​

ಕಿಚ್ಚನ ಚಪ್ಪಾಳೆ ಪಡೆದ ನೈಜೀರಿಯಾ ಕನ್ನಡಿಗ ಮೈಕಲ್ ಅಜಯ್