02-02-2024

ಏಕಾಏಕಿ ಟೀಮ್ ಇಂಡಿಯಾ ತೊರೆದ ಸಿರಾಜ್: ಕಾರಣ ಬಹಿರಂಗ

Author: Vinay Bhat

ಎರಡನೇ ಟೆಸ್ಟ್

ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತಿರುವ ಭಾರತ ತಂಡ ಗೆಲುವಿನ ಯೋಜನೆಯೊಂದಿಗೆ ಎರಡನೇ ಟೆಸ್ಟ್‌ ಆರಂಭಿಸಿದೆ.

ಪ್ಲೇಯಿಂಗ್ XI

ಇಂದಿನಿಂದ ವಿಶಾಖಪಟ್ಟಣದಲ್ಲಿ ಎರಡನೇ ಟೆಸ್ಟ್ ಆರಂಭವಾಗಿದ್ದು, ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಿದೆ.

ಪಟಿದಾರ್ ಪದಾರ್ಪಣೆ

ರಾಹುಲ್ ಮತ್ತು ಜಡೇಜಾ ಗಾಯಗೊಂಡಿರುವ ಕಾರಣ 2 ಬದಲಾವಣೆ ಮಾಡಲಾಗಿದೆ. ಇದರಲ್ಲಿ ರಜತ್ ಪಟಿದಾರ್ ಚೊಚ್ಚಲ ಅವಕಾಶ ಪಡೆದಿದ್ದಾರೆ.

ಸಿರಾಜ್ ಔಟ್

ವೇಗದ ಬೌಲಿಂಗ್‌ನಲ್ಲಿಯೂ ಬದಲಾವಣೆಯಾಗಿದೆ. ಮೊಹಮ್ಮದ್ ಸಿರಾಜ್ ಬದಲಿಗೆ ಮುಖೇಶ್ ಕುಮಾರ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಲಾಗಿದೆ.

ವಿಶ್ರಾಂತಿ

ಸಿರಾಜ್ ಅವರನ್ನು ಪ್ಲೇಯಿಂಗ್-11 ರಿಂದ ಕೈಬಿಟ್ಟಿರುವುದು ಮಾತ್ರವಲ್ಲದೆ ಅವರನ್ನು ತಂಡದಿಂದ ಬಿಡುಗಡೆ ಮಾಡಿ ವಿಶ್ರಾಂತಿ ನೀಡಲಾಗಿದೆ.

ಕೆಲಸದ ಹೊರೆ

ಸುದೀರ್ಘ ಸರಣಿ ಮತ್ತು ಸಿರಾಜ್ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಕಾರಣ, ಕೆಲಸದ ಹೊರೆಯನ್ನು ನಿರ್ವಹಿಸಲು ಅವರನ್ನು ಬಿಡುಗಡೆ ಮಾಡಲಾಗಿದೆ.

ಆವೇಶ್ ಖಾನ್

ಟೀಮ್ ಮ್ಯಾನೇಜ್‌ಮೆಂಟ್ ಮೊಹಮ್ಮದ್ ಸಿರಾಜ್ ಅವರ ಬದಲಿಗೆ ಮತ್ತೋರ್ವ ವೇಗದ ಬೌಲರ್ ಅವೇಶ್ ಖಾನ್ ಅವರನ್ನು ಬ್ಯಾಕಪ್ ಆಗಿ ಕರೆದಿದೆ.