ಭಾರತೀಯ ಕ್ರಿಕೆಟ್​ನಲ್ಲಿ ಸಂಚಲನ: ಸ್ಟಾರ್ ಪ್ಲೇಯರ್ಸ್​ಗೆ ಜೈ ಶಾ ಪತ್ರ

18 February 2024

Author: Vinay Bhat

ಭಾರತೀಯ ಕ್ರಿಕೆಟ್'ನಲ್ಲಿ ಎಲ್ಲವೂ ಅಂದುಕೊಂಡಂತೆ ಸಾಗುತ್ತಿಲ್ಲ. ಬಿಸಿಸಿಐ ನಿಯಮವನ್ನು ಕೆಲ ಆಟಗಾರರು ಪಾಲಿಸುತ್ತಿಲ್ಲ. ಈ ಬಗ್ಗೆ ಬಿಸಿಸಿಐ ದೊಡ್ಡ ತೀರ್ಮಾನ ತೆಗೆದುಕೊಂಡಿದೆ.

ಭಾರತೀಯ ಕ್ರಿಕೆಟ್

ಇಶಾನ್ ಕಿಶನ್​ಗೆ ಹಲವು ಬಾರಿ ಸೂಚನೆ ನೀಡಿದರೂ ರಣಜಿ ಟ್ರೋಫಿ ಆಡಲು ಬರಲಿಲ್ಲ. ಇದೀಗ ಬಿಸಿಸಿಐ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಂಡಿದೆ.

ರೂಲ್ಸ್ ಬ್ರೇಕ್

ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರಿಗೆ ಮುಂಬರುವ ದಿನಗಳು ಕಷ್ಟವಾಗಿರಲಿದೆ. ಬಿಸಿಸಿಐ ಇವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಎಚ್ಚರಿಕೆ

ಕೇಂದ್ರೀಯ ಗುತ್ತಿಗೆ ಹೊಂದಿರುವ ಎಲ್ಲ ಆಟಗಾರರು ತಂಡದಿಂದ ಹೊರಗಿದ್ದರೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಶಾ ಆದೇಶ

ಹೀಗಿದ್ದರೂ ಇಶಾನ್ ಕಿಶನ್ ಮತ್ತು ದೀಪಕ್ ಚಹಾರ್ ಅವರಂತಹ ಆಟಗಾರರು ರಣಜಿ ಪಂದ್ಯ ಆಡಿತ್ತಿಲ್ಲ. ಇದೀಗ ಶಾ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಕಠಿಣ ಕ್ರಮ

ವರದಿಯ ಪ್ರಕಾರ, ಶಾ ಅವರು ಭಾರತ ಎ ತಂಡದೊಂದಿಗೆ ಒಪ್ಪಂದ ಹೊಂದಿರುವ ಎಲ್ಲಾ ಆಟಗಾರರಿಗೆ ಪತ್ರ ಬರೆದಿದ್ದಾರೆ. ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

ಜೈ ಶಾ ಪತ್ರ

ಆಟಗಾರರು ಈಗ ದೇಶೀಯ ಕ್ರಿಕೆಟ್‌ಗೆ ಬದಲಾಗಿ ಐಪಿಎಲ್‌ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ, ಅದು ಸರಿಯಲ್ಲ. ದೇಶೀಯ ಕ್ರಿಕೆಟ್ ಪ್ರಗತಿಯ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.

ಎಲ್ಲರ ಗಮನ ಐಪಿಎಲ್

ದೇಶೀಯ ರೆಡ್-ಬಾಲ್ ಕ್ರಿಕೆಟ್ ಆಯ್ಕೆಯ ಪ್ರಮುಖ ಭಾಗವಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಅಂತರರಾಷ್ಟ್ರೀಯ ಪಂದ್ಯ ಆಡಲು ಸಾಧ್ಯ ಎಂದಿದ್ದಾರೆ.

ತೀವ್ರ ಪರಿಣಾಮ