03-11-2023

LIVE ಪಂದ್ಯದಲ್ಲಿ ಕ್ಯಾಪ್ಟನ್ ಮಾತು ಕೇಳದ ಜಡೇಜಾ: ಸಿಟ್ಟಾದ ರೋಹಿತ್

ಭಾರತಕ್ಕೆ ಜಯ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್'ಗಳ ದಾಖಲೆಯ ಜಯ ಸಾಧಿಸಿತು.

ಕೋಪಗೊಂಡ ರೋಹಿತ್

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ಮಧ್ಯದಲ್ಲಿ ರವೀಂದ್ರ ಜಡೇಜಾ ಅವರ ಮೇಲೆ ಕೋಪಗೊಂಡರು.

ಜಡೇಜಾಗೆ ಸಂದೇಶ

ಜಡೇಜಾ ಕೊನೆಯ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು. ರೋಹಿತ್ ಡ್ರೆಸ್ಸಿಂಗ್ ರೂಮ್‌ನಿಂದ ಜಡೇಜಾಗೆ ಈ ಓವರ್‌ನ ಎಲ್ಲಾ 6 ಎಸೆತಗಳನ್ನು ಆಡಬೇಕೆಂದು ಸೂಚಿಸಿದರು.

ಮಾತು ತಪ್ಪಿದ ಜಡ್ಡು

ದುಷ್ಮಂತ ಚಮೀರಾ ಮೊದಲ ಎಸೆತದಲ್ಲಿ ಜಡೇಜಾ 2 ರನ್ ಗಳಿಸಿದರು, ಆದರೆ 2ನೇ ಎಸೆತದಲ್ಲಿ 1 ರನ್ ಪಡೆದರು. ಸ್ಟ್ರೈಕ್ ಶಮಿಗೆ ಹೋಯಿತು. ಆಗ ರೋಹಿತ್ ಡ್ರೆಸ್ಸಿಂಗ್ ರೂಮ್‌ನಿಂದ ಕೋಪಗೊಂಡರು.

ಶಮಿ ಔಟ್

3ನೇ ಎಸೆತದಲ್ಲಿ ಶಮಿ ರನ್ ಗಳಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗದೆ ಚೆಂಡು ವಿಕೆಟ್ ಕೀಪರ್ ಕೈಗೆ ಹೋಹಿ ರನೌಟ್​ಗೆ ಬಲಿಯಾದರು.

ಜಡೇಜಾ ಔಟ್

ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ಗಳು ಬಂದವು. ಕೊನೆಯ ಎಸೆತದಲ್ಲಿ ಜಡೇಜಾ ಕೂಡ ರನೌಟ್ ಆದರು. 24 ಎಸೆತಗಳಲ್ಲಿ 35 ರನ್ ಗಳಿಸಿದರು.

ಶತಕ ವಂಚಿತರು

ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಗಿಲ್ ಶತಕ ವಂಚಿತರಾದರು. ಗಿಲ್ 92 ರನ್ ಗಳಿಸಿ ಔಟಾದರೆ, ಕೊಹ್ಲಿ 88 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಸೆಮೀಸ್​ಗೆ ಭಾರತ

302 ರನ್​ಗಳ ಅಮೋಘ ಜಯದೊಂದಿಗೆ ಟೀಮ್ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಭಾರತ..!