11 June 2024

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ವ್ಯಕ್ತಿಯ ಕೊಲೆ; ದರ್ಶನ್ ಅರೆಸ್ಟ್

Pic Credit -Instagram 

Author :Akshatha Vorkady

ಪವಿತ್ರ ಗೌಡ

ಕೊಲೆ ಪ್ರಕರಣ ಆರೋಪದಲ್ಲಿ ದರ್ಶನ್ ಅರೆಸ್ಟ್ ಆಗಿದ್ದು, ಈ ಕೇಸ್‌ನಲ್ಲಿ ಪವಿತ್ರ ಗೌಡ ಹೆಸರನ್ನ ಕೂಡ ಎಳೆದು ತರಲಾಗುತ್ತಿದೆ. 

Pic Credit -Instagram 

ಅಶ್ಲೀಲ ಮೆಸೇಜ್

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಪವಿತ್ರಾಗೆ ಅಶ್ಲೀಲ ಮೇಸೆಜ್ ಮಾಡಿದ್ದರು ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. 

Pic Credit -Instagram 

ಪವಿತ್ರ ಗೌಡ

ಇತ್ತೀಚಿಗಷ್ಟೇ ದರ್ಶನ್​ ಜತೆ 10 ವರ್ಷದಿಂದ ಖುಷಿಯಾಗಿದ್ದೇನೆ ಎಂದು ಸೋಶಿಯಲ್​​​ ಮೀಡಿಯಾದಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದ ಪವಿತ್ರಾ ಗೌಡ. 

Pic Credit -Instagram 

ಪವಿತ್ರ ಗೌಡ

ಇದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಿರೋಧಿಸಿ, ಪವಿತ್ರಾ ಅವರ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. 

Pic Credit -Instagram 

ಎಚ್ಚರಿಕೆ

ಅಷ್ಟೇ ಅಲ್ಲದೆ ಪವಿತ್ರಾಗೆ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ಕೊಟ್ಟಿದ್ದು, ಇದಕ್ಕೆ ಪವಿತ್ರಾ ಕೂಡ ತಿರುಗೇಟು ಕೊಟ್ಟಿದ್ದರು. 

Pic Credit -Instagram 

ಕೊಲೆ ಪ್ರಕರಣ

ಸದ್ಯ ಈ ಘಟನೆ ತಣ್ಣಗಾಗುವ ಮುನ್ನ ಇದೀಗ ಕೊಲೆ ಪ್ರಕರಣದಲ್ಲಿ ದರ್ಶನ್​ ಜೊತೆ ಪವಿತ್ರ ಗೌಡ ಹೆಸರನ್ನ ಕೂಡ ಎಳೆದು ತರಲಾಗುತ್ತಿದೆ. 

Pic Credit -Instagram 

ದರ್ಶನ್‌ ಬಂಧನ

ಮೈಸೂರಿನ ನಿವಾಸದಲ್ಲಿ ನಟ ದರ್ಶನ್‌ ಬಂಧನಕ್ಕೊಳಗಾಗಿದ್ದು, ಈ ಪ್ರಕರಣ ಇದೀಗ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿ ಬೀಳುವಂತೆ ಮಾಡಿದೆ.

Pic Credit -Instagram 

ಕೆಟ್ಟದಾಗಿ ಕಾಮೆಂಟ್

ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಎಂದು ವರದಿಯಾಗಿದೆ. 

Pic Credit -Instagram 

ಆರೋಪ

ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಆರ್‌ಆರ್‌ ನಗರದಲ್ಲಿ ಇರುವ ಶೆಡ್‌ಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Pic Credit -Instagram