07-12-2023

ತಡ ಆಗುತ್ತದೆ, ಕುಳಿತುಕೋ: ರೇವಣ್ಣ, ಕುಮಾರಸ್ವಾಮಿ ಮಧ್ಯೆ ಸ್ವಾರಸ್ಯಕರ ಸಂಭಾಷಣೆ

Author: ಗಣಪತಿ ಶರ್ಮ

ಕುಮಾರಸ್ವಾಮಿ ಮಾತಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಸ್ಪಷ್ಟೀಕರಣ ನೀಡಲು ಮುಂದಾದ ರೇವಣ್ಣ.

ಗೊತ್ತಾಯಿತು, ತಡ ಆಗುತ್ತದೆ, ಸಾಕು ಕುಳಿತುಕೋ ಎಂದ ಕುಮಾರಸ್ವಾಮಿ.

ನಂತರ ಚರ್ಚೆ ವೇಳೆ ನೀರಾವರಿ ವಿಚಾರ ಮಾತಾಡುತ್ತಿದ್ದ ಕುಮಾರಸ್ವಾಮಿ. ಮಧ್ಯ ಪ್ರವೇಶಿಸಿ ಹಾಸನದ ನೀರಾವರಿ ವಿಷಯ ಪ್ರಸ್ತಾಪ ಮಾಡಿದ ರೇವಣ್ಣ.

ಬರೀ ಹಾಸನದ್ದು ಹೇಳಬೇಡ, ರಾಜ್ಯದ್ದು ಹೇಳು ಎಂದ ಕುಮಾರಸ್ವಾಮಿ.

ರೇವಣ್ಣ ಮತ್ತು ಕೆಎಂ ಶಿವಲಿಂಗೇಗೌಡ ನಡುವಿನ ಕೊಬ್ಬರಿ ಜಟಾಪಟಿಯನ್ನು ಎರಡು ಬಾರಿ ಪ್ರಸ್ತಾಪಿಸಿದ ಕುಮಾರಸ್ವಾಮಿ.

ಕ್ಷೇತ್ರದ ಜನತೆಗೆ ಸಂದೇಶ ಹೋಗಬೇಕಲ್ವಾ ಅದಕ್ಕೆ ಇಬ್ಬರ ನಡುವೆ ಕಾಂಪಿಟೇಷನ್ ಆಗಿದೆ ಎಂದ ಕುಮಾರಸ್ವಾಮಿ.

ಎರಡನೇ ಬಾರಿ ಹೇಳಿದಾಗ ಎದ್ದು ನಿಂತು ಆಕ್ಷೇಪಿಸಿದ‌ ರೇವಣ್ಣ, ನಮ್ಮದೇನಿಲ್ಲ, ಜನರ ಪರವಾಗಿ ಮಾತಾಡಿದ್ದೇನೆ, ಬೇಡ ಅಂದರೆ ಹೊರಗೆ ಇರುತ್ತೇನೆ ಎಂದರು.

ನನಗೆ ನಿನ್ನೆ ನಡೆದ ಚರ್ಚೆಯ ರೀತಿ ನೋವು ತಂದಿದೆ, ಅದಕ್ಕೆ ಹೇಳಿದ್ದೇನೆ ಎಂದ ಕುಮಾರಸ್ವಾಮಿ.