06-12-2023

ಯತ್ನಾಳ್​​​ರನ್ನು ನಿಮ್ಹಾನ್ಸ್​ಗೆ ಸೇರಿಸೋಣ: ಡಿಕೆ ಶಿವಕುಮಾರ್ ವ್ಯಂಗ್ಯ

Author: ಗಣಪತಿ ಶರ್ಮ

ತೆಲಂಗಾಣ ಸಿಎಂ ಆಯ್ಕೆ ವಿಚಾರವಾಗಿ ದೆಹಲಿಯಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಬೆಂಗಳೂರಿಗೆ ಬಂದರು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದರು.

ಉಗ್ರರ ಜತೆ ನಂಟಿರುವವರ ಜತೆ ಸಿಎಂ ವೇದಿಕೆ ಹಂಚಿಕೊಂಡ ಬಗ್ಗೆ ಯತ್ನಾಳ್ ಆರೋಪ ಮಾಡಿದ್ದರು.

ಬಿಜೆಪಿ ಶಾಸಕ ಯತ್ನಾಳ್‌ರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸೋಣ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಅಧಿವೇಶನಕ್ಕೆ ಗೈರಾಗಿರುವ ಬಗ್ಗೆ ಬಿಜೆಪಿ ಶಾಸಕರಿಂದ ಪ್ರಸ್ತಾಪ ವಿಚಾರಕ್ಕೂ ಅವರು ತಿರುಗೇಟು ನೀಡಿದರು.

ಎಲ್ಲಾ ಗೊತ್ತಿದೆ ಬಿಡಿ, ಹುಡುಕಾಡಲಿ ಯಾರು ಬೇಡ ಅಂದ್ರು ಎಂದು ಡಿಕೆ ಶಿವಕುಮಾರ್ ಕುಹಕವಾಡಿದರು.

ಡಿಸಿಎಂ ಡಿಕೆ ಶಿವಕುಮಾರ್ ಸದನಕ್ಕೆ ಹಾಜರಾಗದಿರುವ ಬಗ್ಗೆ ಬಿಜೆಪಿ ಶಾಸಕರು ಸರ್ಕಾರವನ್ನು ಪ್ರಶ್ನಿಸಿದ್ದರು.

5 ರಾಜ್ಯಗಳ ಚುನಾವಣೆಯಲ್ಲಿ ಜನ ನೀಡಿದ ತೀರ್ಪಿಗೆ ತಲೆಬಾಗುತ್ತೇವೆ: ಡಿಕೆ ಶಿವಕುಮಾರ್