28-11-2023

ಮತ್ತೆ ಮೈತ್ರಿ ಸರ್ಕಾರ ಬೇಕೆಂದು ಜನರ ನಿರೀಕ್ಷೆ: ಕುಮಾರಸ್ವಾಮಿ

Author: ಗಣಪತಿ ಶರ್ಮ

ಮಡಿಕೇರಿಯಲ್ಲಿ ಹೆಚ್​ಡಿಕೆ

ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮಡಿಕೇರಿಗೆ ಬಂದಿದ್ದೇನೆ: ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆ

ಕಾಂಗ್ರೆಸ್​ ಗೆದ್ದಿದ್ದೇಕೆ?

ನಮ್ಮ ಶಕ್ತಿ ಕಡಿಮೆ ಇರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆ ಆಗಬೇಕಿದೆ: ಹೆಚ್ ಡಿಕೆ

ಕಾಂಗ್ರೆಸ್​ ಗೆದ್ದಿದ್ದೇಕೆ?

ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಬೇಕೆಂದು ಜನರ ನಿರೀಕ್ಷೆ ಇದೆ. ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಅಸಮಾಧಾನವಿದೆ: ಹೆಚ್​ಡಿಕೆ

ಸಂಘಟನೆ ಕೊರತೆ

ಪಕ್ಷ ಸಂಘಟನೆಯಲ್ಕಿ ಸ್ವಲ್ಪ ಕೊರತೆ ಇದೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಯಾಗಬೇಕಿದೆ: ಕುಮಾರಸ್ವಾಮಿ

ಚುನಾವಣೆಗೆ ಸಿದ್ಧತೆ

ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ: ಕುಮಾರಸ್ವಾಮಿ

ಗ್ಯಾರೆಂಟಿಗಳಲ್ಲಿ ದೋಷ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ದೋಷಗಳಿವೆ ಎಂದು ಟೀಕಿಸಿದ ಕುಮಾರಸ್ವಾಮಿ.

ಜನತಾದರ್ಶನಕ್ಕೆ ಶಹಬ್ಬಾಸ್

ಸಿಎಂ ಜನಸ್ಪಂದನ ಮಾಡುತ್ತಿರುವುದು ಮೆಚ್ಚತ್ತಕ್ಕ ವಿಚಾರ. ಜನರ ಸಮಸ್ಯೆಗಳ ಗ್ರೌಂಡ್ ರಿಯಾಲಿಟಿ ಅವರಿಗೆ ಅರ್ಥ ಆಗಿರಬಹುದು.

ಮೈತ್ರಿಗೆ  ಗೆಲುವು

lಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್​ ಮೈತ್ರಿ 28 ಸ್ಥಾನ ಗೆಲ್ಲಲಿದೆ: ಕುಮಾರಸ್ವಾಮಿ