ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಶನ

27 ನವೆಂಬರ್  2023

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 9:30ರಿಂದ ಜನತಾ ದರ್ಶನ ನಡೆಸಿದರು. ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ದರ್ಶನ

ಸಿಎಂ ಸಿದ್ದರಾಮಯ್ಯ ಅವರು ಇಂದಿನ ಜನತಾ ದರ್ಶನದಲ್ಲಿ  3,500 ಅರ್ಜಿಗಳನ್ನು ಸ್ವೀಕರಿಸಿದರು. ಈ ಅರ್ಜಿಗಳಿಗೆ 1 ವಾರದ ಒಳಗೆ ಉತ್ತರ ನೀಡಬೇಕು. 15 ದಿನಗಳಲ್ಲಿ ಇತ್ಯರ್ಥವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  

3,500 ಅರ್ಜಿಗಳು ಸ್ವೀಕಾರ

 ಮಧ್ಯಾಹ್ನ 3 ಗಂಟೆವರೆಗೆ  1805 ಅರ್ಜಿಗಳ ಸ್ವೀಕಾರ. 37 ಸಮಸ್ಯೆಗಳಿಗೆ ಪರಿಹಾರ . ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 203 ಅರ್ಜಿಗಳ ಸಲ್ಲಿಕೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಂಬಂಧಿಸಿದಂತೆ 75 ಅರ್ಜಿಗಲು ಸಲ್ಲಿಕೆ.

3 ಗಂಟೆತನಕ 1805 ಅರ್ಜಿ ಸ್ವೀಕಾರ

ಮಧ್ಯಾಹ್ನ 1 ಗಂಟೆವರೆಗೆ 1,147 ಅರ್ಜಿಗಳನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಸ್ಥಳದಲ್ಲೇ 20 ಅರ್ಜಿಗಳಿಗೆ ಪರಿಹಾರ ನೀಡಲಾಯಿತು. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 130 ಅರ್ಜಿಗಳು ಬಂದಿದ್ದವು.

ಮಧ್ಯಾಹ್ನ 1 ಗಂಟೆವರೆಗೆ 1,147 ಅರ್ಜಿ

ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ ಯುವಕನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲೇ 5 ಲಕ್ಷ ರೂ. ಮಂಜೂರು ಮಾಡಿದರು. 

ಯುವಕನಿಗೆ 5 ಲಕ್ಷ ರೂ. ಮಂಜೂರು

ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹಿರಿಯ ನಾಗರಿಕರೊಬ್ಬರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯನ್ನು ಭೇಟಿ ಮಾಡಿಸುವಂತೆ ಸಿದ್ದರಾಮಯ್ಯರ ಬಳಿ ಮನವಿ ಮಾಡಿದರು.

ರಾಹುಲ್ ಗಾಂಧಿ ಗಭೇಟಿಗೆ ಮನವಿ

ಗದಗ ಜಿಲ್ಲೆಯಿಂದ ಬಂದಿದ್ದ ದಂಪತಿ ತಮ್ಮ 7 ತಿಂಗಳ ಮಗು ಮೇಘಾಶ್ರೀ ಹೃದಯದಲ್ಲಿ 2 ರಂಧ್ರ ಇದ್ದು, ಶಸ್ತ್ರಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂದು ಅಳಲು ತೋಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡಲೆ 2 ಲಕ್ಷ ಪರಿಹಾರ ಘೋಸಿದ್ದರು. 

ಮಹಿಳೆಗೆ 2 ಲಕ್ಷ ರೂ. ಪರಿಹಾರ 

ಜನತಾ ದರ್ಶನಕ್ಕೆ ಆಗಮಿಸಿದ್ದ ಜನರಿಗೆ ಗೃಹ ಕಚೇರಿ ಕೃಷ್ಣಾದಿಂದ ಮೆಜೆಸ್ಟಿಕ್​ವರೆಗೆ ಬಿಎಂಟಿಸಿಯಲ್ಲಿ ಉಚಿತ ಪ್ರಯಾಣ ಅವಕಾಶ ಮಾಡಿಕೊಡಲಾಯಿತು

ಜನತಾ ದರ್ಶನಕ್ಕೆ ಬಂದವರಿಗೆ ಉಚಿತ ಬಸ್​

ರಕ್ಷಿತಾ ಮಾತ್ರವಲ್ಲ ಡೀಪ್ಫೇಕ್ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ