ಹರೇಕಳ ಹಾಜಬ್ಬಗೆ ಏರ್​ ಇಂಡಿಯಾ ಎಕ್ಸ್​​ಪ್ರೆಸ್​ ಗೌರವ

 24 November 2023

ಅಕ್ಷರ ಸಂತ ಎಂದೇ ಖ್ಯಾತಿವೆತ್ತಿರುವ ಹರೇಕಳ ಹಾಜಬ್ಬ ಇತ್ತೀಚೆಗೆ ದಮ್ಮಾಮ್‌ಗೆ ತೆರಳಿದ್ದಾರೆ.

ಅಕ್ಷರ ಸಂತಗೆ ನಮನ

ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಜಬ್ಬ ದಮ್ಮಾಮ್‌ಗೆ ತೆರಳಿದ್ದರು.

 ವಿದೇಶಕ್ಕೆ ಹಾಜಬ್ಬ

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಹಾಜಬ್ಬ ದಮ್ಮಾಮ್​ಗೆ ತೆರಳಿದ್ದರು. ಇದೇ ವೇಳೆ ಅವರನ್ನು ಸಿಬ್ಬಂದಿ ಗುರುತಿಸಿದ್ದಾರೆ.

ಏರ್​ ಇಂಡಿಯಾದಲ್ಲಿ ಹಾಜಬ್ಬ

ಹಾಜಬ್ಬನನ್ನು ಗುರುತಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿ, ವಿಮಾನದ ಕ್ಯಾಪ್ಟನ್ ಗಮನಕ್ಕೆ ತಂದರು.

ಏರ್ ಇಂಡಿಯಾ ಸನ್ಮಾನ

ವಿಮಾನದ ಕ್ಯಾಪ್ಟನ್ ಹಾಜಬ್ಬ ಅವರನ್ನು ಪ್ರಯಾಣಿಕರಿಗೆ ಪರಿಚಯಿಸಿ ಮಾತನಾಡಿದರು.

ಕ್ಯಾಪ್ಟನ್​ರಿಂದ ಗೌರವ

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ನಮ್ಮ ವಿಮಾನದಲ್ಲಿದ್ದಾರೆಂದ ಕ್ಯಾಪ್ಟನ್

ಸೇವೆಗೆ ಮೆಚ್ಚುಗೆ

ಹಾಜಬ್ಬ ನಮ್ಮ ವಿಮಾನದಲ್ಲಿ ಹಾರಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ, ಅವರಿಗೆ ಅಭಿನಂದನೆ ಎಂದ ಕ್ಯಾಪ್ಟನ್

‘ನಮ್ಮ ಹೆಮ್ಮೆ ಹಾಜಬ್ಬ’

ಕಿತ್ತಳೆ ಮಾರಾಟ ಮಾಡಿ ಬಂದ ಹಣದಿಂದ ಹಾಜಬ್ಬ ಶಾಲೆ ಕಟ್ಟಿಸಿದ್ದರು. ಇದಕ್ಕಾಗಿ ಅವರು ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

ಕಿತ್ತಳೆ ಮಾರಿ ಶಾಲೆ ಕಟ್ಟಿದ ಸಂತ