07-12-2023

ಮೌಲ್ವಿ ತನ್ವೀರ್ ಪೀರ್ ದೇಶಭಕ್ತರೆಂದು ಸಾಬೀತುಮಾಡಿದ್ರೆ ಸಿದ್ದರಾಮಯ್ಯರಂತಹ ದಡ್ಡರಿಲ್ಲ: ಶಾಸಕ ಯತ್ನಾಳ್

Author: Gangadhar Saboji

ಮೌಲ್ವಿ ತನ್ವೀರ್ ಪೀರ್ ಗೆ ISIS ಜೊತೆ ನಂಟಿದೆ ಎಂಬ ಆರೋಪ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಮೌಲ್ವಿ ತನ್ವೀರ್ ಪೀರ್​ ವಿರುದ್ಧ ಎನ್​ಐಎ ತನಿಖೆ ಮಾಡಲೇ ಬೇಕು. ಮೌಲ್ವಿ ತನ್ವೀರ್ ಪೀರ್​ ಎಲ್ಲೆಲ್ಲಿ ಹೋಗಿದ್ದರು ಎಲ್ಲವೂ ಗೊತ್ತಿದೆ.

ರಾಷ್ಟ್ರೀಯ ತನಿಖಾ ದಳಕ್ಕೆ ನಾನು ಈಗಾಗಲೇ ದಾಖಲೆ ನೀಡಿದ್ದೇನೆ.

ತನ್ವೀರ್ ಪೀರ್ ಕಾಂಗ್ರೆಸ್ ಏಜೆಂಟರಾಗಿ ಕೆಲಸ ಮಾಡಿದ್ದಾರೆ. ತೆಲಂಗಾಣ ವಿಧಾನಸಭಾ ಚುನಾವಣೆ ವೇಳೆ ಪ್ರಚಾರ ಮಾಡಿದ್ದರು.

ಕಾರ್ಪೊರೇಟರ್ ಪತಿ ಕೊಲೆ ಕೇಸ್​ನಲ್ಲಿ ಭಾಗಿಯಾಗಿದ್ದ. ಅಂತಹ ವ್ಯಕ್ತಿಯನ್ನು ಇವರು ಒಪ್ಪಿಕೊಳ್ಳುತ್ತಾರೆ.

ಸಚಿವರ ಮಾತು ಕೇಳಿ ತನ್ವೀರ್ ಪೀರ್​ ಪಕ್ಕ ಸಿದ್ದರಾಮಯ್ಯ ಕೂತಿದ್ದರು.

ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಮಾತು ಕೇಳಿ ಕುಳಿತಿದ್ದರು.