06-12-2023

ಸದ್ದು ಮಾಡಿದ ಗೂಳಿಹಟ್ಟಿಗೆ ಗುಮ್ಮಿದ ಆರ್ ಅಶೋಕ

Author: ಗಣಪತಿ ಶರ್ಮ

ಆರ್​​ಎಸ್​​ಎಸ್​ನ ನಾಗಪುರ ಕಚೇರಿಯ ಮ್ಯೂಸಿಯಂನಲ್ಲಿ ಪರಿಶಿಷ್ಟ ಎಂಬ ಕಾರಣಕ್ಕೆ ಒಳಬಿಟ್ಟಿರಲಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದರು.

ಗೂಳಿಹಟ್ಟಿ ಹೇಳಿಕೆಗೆ ಬೆಳಗಾವಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಗೂಳಿಹಟ್ಟಿ ಶೇಖರ್​ಗೂ ನಾಗಪುರಕ್ಕೂ ಏನು ಸಂಬಂಧ ಎಂದು ಅಶೋಕ ಪ್ರಶ್ನಿಸಿದ್ದಾರೆ.

ನಾನು ಹತ್ತನೇ ವಯಸ್ಸಿಗೆ ಆರ್​ಎಸ್​ಎಸ್ ಚಡ್ಡಿ ಹಾಕಿದವನು ಎಂದ ಅಶೋಕ್.

ಕಾಂಗ್ರೆಸ್ ಸೇರಲು ಗೂಳಿಹಟ್ಟಿಗೆ ಈಗ ಏನೋ ನೆಪ ಬೇಕು. ಅದಕ್ಕೆ ಏನೋ ಪಿತೂರಿ ಮಾಡಿದ್ದಾರೆ ಅಷ್ಟೇ: ಅಶೋಕ್

ನಾಗಪುರದಲ್ಲಿ ಯಾರೂ ಜಾತಿ ಹೇಳಬಾರದು ಎಂಬ ಕಂಡಿಷನ್ ಇದೆ: ಅಶೋಕ್

ನಾಗಪುರದಲ್ಲಿ ಪೊಲೀಸ್ ತಪಾಸಣೆ ಇರುತ್ತದೆಯೇ ಹೊರತು ಆರ್​​ಎಸ್​​ಎಸ್ ತಪಾಸಣೆ ಇರಲ್ಲ: ಅಶೋಕ್

ಕಾಂಗ್ರೆಸ್ ಬಾಗಿಲು ಕಾಯುತ್ತಿರುವ ಸಂದರ್ಭದಲ್ಲಿ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ ಎಂದು ಅಶೋಕ್ ಆಕ್ರೋಶ.