ವಡೆ ಕೊಟ್ಟು ಟ್ರಾಫಿಕ್​ ರೂಲ್ಸ್​​​ ಜಾಗೃತಿ ಮೂಡಿಸಿದ ಸಾಮಾಜಿಕ ಕಾರ್ಯಕರ್ತ

01 Dec 2023

Author: Vivek Biradar

ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಟ್ರಾಫಿಕ್​ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರು ಜನರು ಪಾಲಿಸುವುದಿಲ್ಲ. 

ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯ ರೇಣುಕ ಮಂದಿರ ಬಳಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಅವರು ರಾಂಗ್​ ರೂಟ್ (ಒನ್​​ ವೇ) ​​ನಲ್ಲಿ ಬಂದವರಿಗೆ ಉದ್ದಿನ‌ ವಡೆ ‌ಕೊಟ್ಟು ಸ್ವಾಗತಿಸಿದರು. 

ನೀವು ರಾಂಗ್ ರೂಟ್​ನಲ್ಲಿ ಬಂದರೇ ನಿಮ್ಮನೆಯವರು‌ ನಿಮ್ಮ ತಿಥಿ ವಡೆ ತಿನ್ನಬೇಕಾಗುತ್ತದೆ ಎಂದು ಹೇಳುವ ಮೂಲಕ ವಿಭಿನ್ನವಾಗಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

 ಸಾಮಾಜಿಕ‌‌ ಕಾರ್ಯಕರ್ತರು ರಾಂಗ್ ರೂಟ್​ನಲ್ಲಿ ಬಂದವರಿಗೆ ಉದ್ದಿನ ವಡೆ ಕೊಟ್ಟು ಸಂಚಾರಿ ನಿಯಮ‌ಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ.

ಒನ್​ ವೇ ರಸ್ತೆಯಲ್ಲಿ ಬರುವುದರಿಂದ ಅಪಘಾತಗಳು ಜಾಸ್ತಿಯಾಗುತ್ತಿವೆ. ‌ಇದರಿಂದ ನಿರಂತರವಾಗಿ ಸಂಚಾರದ ತೊಂದರೆಯಾಗುತ್ತಿದೆ. ಹೀಗಾಗಿ ದಯವಿಟ್ಟು ರಾಂಗ್ ರೂಟ್​ನಲ್ಲಿ ಬರಬೇಡಿ ಎಂದು ಸಾಮಾಜಿಕ ಕಾರ್ಯಕರ್ತರು ಮನವಿ ಮಾಡಿದರು. 

ಸಣ್ಣ ವಯಸಲ್ಲೇ ಮನೆ ಬಿಟ್ಟು ಹೋಗಿದ್ದ ವಿನಯ್