01 February 2025
Author: Ganapathi Sharma
ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ಹಲವು ರೈಲ್ವೆ ಯೋಜನೆಗಳಿಗೆ ಅನುದಾನಗಳನ್ನು ಘೋಷಿಸಲಾಗಿದೆ.
ಕಲ್ಯಾಣದುರ್ಗ ಮಾರ್ಗವಾಗಿ ರಾಯದುರ್ಗ, ತುಮಕೂರು ರೈಲ್ವೆ ಯೋಜನೆಗೆ 434.85 ಕೋಟಿ ರೂ. ಘೋಷಣೆಯಾಗಿದೆ.
ಬಾಗಲಕೋಟ - ಕುಡಚಿ 428.1 ಕೋಟಿ ರೂ., ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ-ಡಿ-ಗಾಮಾ (352.28 ಕಿಮೀ) ಯೋಜನೆಗೆ 413.73 ಕೋಟಿ ರೂ. ಘೋಷಣೆಯಾಗಿದೆ.
ಹೊಟಗಿ-ಕುಡಗಿ-ಗದಗ ಮಾರ್ಗಕ್ಕೆ 401.15 ಕೋಟಿ ರೂ, ಬೆಂಗಳೂರು-ವೈಟ್ಫೀಲ್ಡ್-ಬೆಂಗಳೂರು ನಗರ- ಕೃಷ್ಣರಾಜಪುರಂ ಚತುಷ್ಪಥ ಪುಣೆ-ಮಿರಜ್-ಲೋಂಡಾಗೆ 357.6 ಕೋಟಿ ರೂ. ಘೋಷಣೆಯಾಗಿದೆ.
ಬೈಯಪನಹಳ್ಳಿಯಿಂದ ಹೊಸೂರು 223.5 ಕೋಟಿ ರೂ, ಮುನಿರಾಬಾದ್-ಮಹಬೂಬ್ನರ 214.05 ಕೋಟಿ ರೂ, ಯಶವಂತಪುರದಿಂದ ಚನ್ನಸಂದ್ರಕ್ಕೆ 178.8 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ.
ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗಕ್ಕೆ 78.4 ಕೋಟಿ ರೂ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗಕ್ಕೆ 64.05 ಕೋಟಿ ರೂ. ಹಂಚಿಕೆಯಾಗಿದೆ.
ಕಂಕನಾಡಿ-ಪಣಂಬೂರು ಯೋಜನೆಗಳಿಗೆ 8.94 ಕೋಟಿ ರೂ, ಧಾರವಾಡ ಬೆಳಗಾವಿಗೆ 8.54 ಕೋಟಿ ರೂ. ಹಂಚಿಕೆಯಾಗಿದೆ. ಇನ್ನೂ ಅನೇಕ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
NEXT - ಯಾವ ವರ್ಷ ಎಷ್ಟು ಮಂದಿಗೆ ಲೋನ್ ಕೊಟ್ಟಿದ್ದಾರೆ ಮೈಕ್ರೋ ಫೈನಾನ್ಸ್ನವರು? ಇಲ್ಲಿದೆ ವಿವರ