ಯಾವ ಕಡೆಗೆ ಸೊಂಡಿಲಿರುವ ಗಣೇಶನನ್ನು ಪೂಜಿಸಬೇಕು?

28 Aug 2024

Ayesha Banu

ಸಂಕಷ್ಟಹರ ಗಣಪನಿಗೆ ಪ್ರತಿನಿತ್ಯ ಪೂಜಿಸುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ. ಗಣೇಶ ಹಬ್ಬದಂದು ಗಣೇಶ ಮೂರ್ತಿಯನ್ನು ಮನೆಗೆ ತರುವಾಗ ಗಣೇಶನ ಸೊಂಡಿಲು ಯಾವ ಕಡೆ ಇದೆ ಎಂಬುವುದನ್ನು ಗಮನಿಸಲೇ ಬೇಕು.

ಸಂಕಷ್ಟಹರ ಗಣಪ 

ಹೆಚ್ಚಿನ ಜನರು ಎಡಕ್ಕೆ ಸೊಂಡಿಲು ಹೊಂದಿರುವ ವಿಗ್ರಹವನ್ನು ಖರೀದಿಸುತ್ತಾರೆ. ಎಡಕ್ಕೆ ಬಾಗಿದ ಸೊಂಡಿಲನ್ನು ವಾಮಾಮುಖಿ ಎಂದು ಕರೆಯಲಾಗುತ್ತದೆ. ಗಣೇಶನ ಎಡಭಾಗವು ಚಂದ್ರನ ಗುಣಗಳನ್ನು ಹೊಂದಿದ್ದು, ಶಾಂತಿಯುತ ಮತ್ತು ಆನಂದ ತರುತ್ತದೆ. 

ಎಡಮುರಿ ಗಣಪ

ಬಹುತೇಕರು ಎಡ ಸೊಂಡಿಲಿನ ವಿಗ್ರಹವನ್ನು ಬಯಸುತ್ತಾರೆ. ಏಕೆಂದರೆ ಅದು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಎಡ ಸೊಂಡಿಲಿನ ಗಣೇಶ ಮನೆಯನ್ನು ಶುದ್ಧೀಕರಿಸುತ್ತಾನೆ ಮತ್ತು ವಾಸ್ತು ದೋಷವನ್ನು ಗುಣಪಡಿಸಲು ಸಹಾಯ ಮಾಡುತ್ತಾನೆ. 

ಎಡಮುರಿ ಗಣಪ

ಬಲ ಸೊಂಡಿಲು ಇರುವ ಗಣೇಶ ಬಹುತೇಕ ಅಪರೂಪ. ಬಲ ಸೊಂಡಿಲಿನ ಗಣೇಶ ಮೂರ್ತಿಗಳನ್ನು ಶ್ರದ್ಧೆಯಿಂದ ಮತ್ತು ಧಾರ್ಮಿಕವಾಗಿ ಪೂಜಿಸಲಾಗುತ್ತದೆ. ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯದಲ್ಲಿರುವ ಗಣೇಶನ ವಿಗ್ರಹದ ಸೊಂಡಿಲು ಬಲಕ್ಕೆ ಬಾಗಿದೆ. 

ಬಲಮುರಿ ಗಣಪ

ಸಿದ್ಧಿ, ಗಣಪತಿಯ ಪತ್ನಿಯರಲ್ಲಿ ಒಬ್ಬಳು. ಅವನ ಬಲಭಾಗದಲ್ಲಿ ನೆಲೆಸಿದ್ದಾಳೆ ಮತ್ತು ಆದ್ದರಿಂದ ಬಲಕ್ಕೆ ಬಾಗಿದ ಸೊಂಡಿಲನ್ನು ಹೊಂದಿರುವ ವಿಗ್ರಹವನ್ನು ಸಿದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ.

ಬಲಮುರಿ ಗಣಪ

ನೇರ ಸೊಂಡಿಲ ಗಣಪ ಸಿಗುವುದು ಕಡಿಮೆ. ಇದು ಅತ್ಯಂತ ಅಪರೂಪ. ಆದರೆ ಇದು ಆಳವಾದ ಮಹತ್ವವನ್ನು ಹೊಂದಿದೆ. ಈ ರೀತಿಯ ಗಣೇಶ ವಿಗ್ರಹಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಎನ್ನಲಾಗುತ್ತೆ.  

ನೇರ ಸೊಂಡಿಲ ಗಣಪ

ನೇರ ಸೊಂಡಿಲ ಅರ್ಥ, ಸುಶುಮಾ ನಾಡಿ ಮುಕ್ತವಾಗಿದೆ. ದೇಹ ಇಂದ್ರಿಯಗಳ ನಡುವೆ ಸಂಪೂರ್ಣ ಏಕತೆ ಇದೆ. ದೈವತ್ವವು ಸಂಪೂರ್ಣವಾಗಿದೆ. ಸಂಪೂರ್ಣವಾಗಿ ಪಾರದರ್ಶಕರಾಗಿದ್ದೀರಿ ಎಂದು ಅರ್ಥ.

ನೇರ ಸೊಂಡಿಲ ಗಣಪ