ಸಿಎಸ್​ಕೆ ಉಳಿಸಿಕೊಳ್ಳಬಹುದಾದ ಐದು ಆಟಗಾರರನ್ನು ಹೆಸರಿಸಿದ ಹರ್ಭಜನ್ ಸಿಂಗ್

27  october 2024

Pic credit: Google

ಪೃಥ್ವಿ ಶಂಕರ

ಐಪಿಎಲ್ 2025 ರ ಮೆಗಾ ಹರಾಜಿಗೆ ಹೆಚ್ಚು ಸಮಯ ಉಳಿದಿಲ್ಲ. ಇದಕ್ಕೂ ಮುನ್ನ ಫ್ರಾಂಚೈಸಿಗಳು ಆಟಗಾರರ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಬೇಕು.

Pic credit: Google

ಬಿಸಿಸಿಐ ಧಾರಣೆ ದಿನಾಂಕವನ್ನು ಅಕ್ಟೋಬರ್ 31 ಎಂದು ನಿಗದಿಪಡಿಸಿದೆ. ಇದಕ್ಕೂ ಮೊದಲು, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳಬಹುದಾದ ಐದು ಆಟಗಾರರನ್ನು ಹೆಸರಿಸಿದ್ದಾರೆ.

Pic credit: Google

ಹರ್ಭಜನ್ ಸಿಂಗ್ ಪ್ರಕಾರ, ಸಿಎಸ್‌ಕೆ ಧೋನಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ರಚಿನ್ ರವೀಂದ್ರ ಮತ್ತು ಮತಿಶಾ ಪತಿರಾನ ಅವರನ್ನು ಉಳಿಸಿಕೊಳ್ಳಬಹುದು.

Pic credit: Google

ರುತುರಾಜ್ ಗಾಯಕ್ವಾಡ್ ತಂಡದ ನಾಯಕನಾಗಿರುವ ಕಾರಣ ಅವರನ್ನು ಉಳಿಸಿಕೊಳ್ಳುವುದು ಈಗಾಗಲೇ ಸ್ಪಷ್ಟವಾಗಿದೆ. ಅಲ್ಲದೆ ಅವರ ಪ್ರದರ್ಶನ ಕೂಡ ಉತ್ತಮವಾಗಿದೆ.

Pic credit: Google

ಸಿಎಸ್​ಕೆ ತಂಡದ ಯಶಸ್ಸಿನಲ್ಲಿ ಎಂಎಸ್​ ಧೋನಿ ಕೊಡುಗೆ ಅಪಾರವಾಗಿದೆ. ಹೀಗಾಗಿ ಚೆನ್ನೈ ತಂಡ ಅವರು ಕ್ರಿಕೆಟ್ ಆಡುವವರೆಗೂ ತಂಡದಲ್ಲಿ ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ. ಹೀಗಾಗಿ ಧೋನಿ ತಂಡದಲ್ಲಿ ಉಳಿಯುವುದು ಖಚಿತ.

Pic credit: Google

ರವೀಂದ್ರ ಜಡೇಜಾ, ಸಿಎಸ್​ಕೆ ತಂಡದಲ್ಲಿ ಬಹಳ ವರ್ಷಗಳಿಂದ ಆಡುತ್ತಿದ್ದು, ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

Pic credit: Google

ಉಳಿದಂತೆ ವಿದೇಶಿ ಆಟಗಾರರ ಪೈಕಿ ಸಿಎಸ್​ಕೆ ರಚಿನ್ ರವೀಂದ್ರ ಹಾಗೂ ಮತಿಶಾ ಪತಿರಾನ ಅವರನ್ನು ಉಳಿಸಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.

Pic credit: Google