ವಳಲು‌ ಗ್ರಾಮದಲ್ಲಿ ಒಂಟಿ ಕೋರೆ ಆನೆ ಸೆರೆ

28 Nov 2023

Author: Rakesh Nayak Manchi

ಹಾಸನ ಜಿಲ್ಲೆ ಬೇಲೂರು ತಾಲೂಕಿನ ವಳಲು‌ ಗ್ರಾಮದಲ್ಲಿ ಇಂದು 4ನೇ ದಿನದ ಕಾರ್ಯಾಚರಣೆಯಲ್ಲಿ ಮತ್ತೊಂದು ಕಾಡಾನೆ ಸೆರೆಯಾಗಿದೆ.

ವಳಲು‌ ಗ್ರಾಮದ ಜೈದೀಪ್ ಎಸ್ಟೇಟ್‌ನಲ್ಲಿ ಒಂಟಿ ಕೋರೆ ಆನೆ ಸೆರೆ ಸಿಕ್ಕಿದೆ.

ಆರು ಸಾಕಾನೆಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಎಲ್ಲಂದರಲ್ಲಿ ಓಡಾಡಿದ್ದ ಒಂಟಿ ಕೋರೆ ಆನೆ ಇದಾಗಿದೆ

ಇಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು

ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯರ ಹರಸಾಹಸಪಟ್ಟರು.

ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕವೂ ಕಾಡಾನೆ ನಡೆದುಕೊಂಡು ಹೋಗಿದೆ.

ಅರಿವಳಿಕೆ ನೀಡಿದ ನಂತರವೂ ಆನೆ ನಡೆದುಕೊಂಡು ಹೋಗಿದ್ದು, ಸಾಕಾನೆಗಳು, ಅಧಿಕಾರಿಗಳು, ಸಿಬ್ಬಂದಿ ಅದನ್ನು ಹಿಂಬಾಲಿಸಿ ಹೈರಾಣಾದರು.

ಸತತ 6 ಗಂಟೆ ಕಾರ್ಯಾಚರಣೆ ನಡೆಸಿ ಆನೆಯನ್ನು ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.