Pic credit - Instagram

Author: Rajesh Duggumane

11 July 2025

ಕನ್ನಡ ಕಿರುತೆರೆ ನಟಿಗೆ ಪತಿಯಿಂದಲೇ ಚಾಕು ಇರಿತ

ಕಿರುತೆರೆ ನಟಿ

ನಟಿ ಮಂಜುಳಾ ಅಲಿಯಾಸ್​ ಶ್ರುತಿಗೆ ಪತಿ ಚಾಕು ಇರಿದಿದ್ದಾನೆ. ‘ಅಮೃತಧಾರೆ’ ಮೊದಲಾದ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. 

ಅಮರೇಶ್ 

ಅಮರೇಶ್​ ಎಂಬಾತನನ್ನು ಪ್ರೀತಿಸಿ ಶ್ರುತಿ ಮದುವೆಯಾಗಿದ್ದರು.ಈಗ ಪತಿಯೇ ಚಾಕು ಹಾಕಿದ್ದಾನೆ. ಶೀಲದ ಶಂಕೆ ಇದಕ್ಕೆ ಪ್ರಮುಖ ಕಾರಣ. 

ಘಟನೆ ನಡೆದಿದ್ದು

ಜುಲೈ 4ರಂದು ಮುನೇಶ್ವರ ಲೇಔಟ್​ನಲ್ಲಿ ಈ ಘಟನೆ ನಡೆದಿದೆ. ಈಗ ವಿಚಾರ ಬೆಳಕಿಗೆ ಬಂದಿದೆ.  ಇದು ಶಾಕಿಂಗ್ ಎನಿಸಿದೆ. 

ಇಬ್ಬರು ಮಕ್ಕಳು

ಅಮರೇಶ್ ಹಾಗೂ ಶ್ರುತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಈಗ ಶ್ರುತಿ ಪತಿಯಿಂದ ಸಂಕಷ್ಟ ಅನುಭವಿಸಿದ್ದಾರೆ.

ಜಗಳ

ಶ್ರುತಿ ಹಾಗೂ ಪತಿ ಮಧ್ಯೆ ಜಗಳ ಆಗುತ್ತಲೇ ಇತ್ತು. ಇತ್ತೀಚೆಗೆ ರಾಜಿ ಸಂಧಾನ ಆಗಿತ್ತು. ಇದಾದ ಮರುದಿನವೇ ಚಾಕು ಚುಚ್ಚಿದ ಪತಿ. 

ಪೆಪ್ಪರ್ ಸ್ಪ್ರೇ

ಪೆಪ್ಪರ್ ಸ್ಪ್ರೇ ಹೊಡೆದು ಚಾಕು ಇರಿದು ಕೊಲೆಗೆ ಯತ್ನ ನಡೆದಿದೆ. ಪಕ್ಕೆಲುಬು, ತೊಡೆ, ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.

ಅಮೃತಧಾರೆ

ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. 

ಛಾಯಾ ಸಿಂಗ್ ನಟನೆ 

ಛಾಯಾ ಸಿಂಗ್ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಪಾತ್ರ ಎಲ್ಲ ಕಡೆಗಳಿಂದ ಗಮನ ಸೆಳೆಯುತ್ತಿದೆ.