Pic credit - Instagram

Author: Rajesh Duggumane

28 May 2025

ವಿವಾದದ ಬಳಿಕ ಪ್ರಾಮಾಣಿಕವಾಗಿರಬೇಕು ಎಂದ ದೀಪಿಕಾ ಪಡುಕೋಣೆ 

ದೀಪಿಕಾ ವಿವಾದ 

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಮಾಡಿಕೊಂಡ ವಿವಾದವು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. 

ಸ್ಪಿರಿಟ್ ಸಿನಿಮಾ 

ಸ್ಪಿರಿಟ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ನಟಿಸಬೇಕಿತ್ತು. ಕಥೆ ಕೇಳಿ ಆ ಬಳಿಕ ಅವರು ಹೊರ ಬಂದರು. 

ಕಥೆ ಲೀಕ್ 

ದೀಪಿಕಾ ಪಡುಕೋಣೆ ಅವರು ಕಥೆ ಲೀಕ್ ಮಾಡಿದ ಆರೋಪವನ್ನು ಸಂದೀಪ್ ರೆಡ್ಡಿ ವಂಗ ಹೊರಿಸಿದ್ದಾರೆ. 

ಪರೋಕ್ಷ ಟಿಕೆ 

ಸಂದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ  ನಟಿಯನ್ನು ಟೀಕಿಸಿದ್ದಾರೆ. 

ನಟಿಯ ಉತ್ತರ ಏನು?

ದೀಪಿಕಾ ಅವರು ಇತ್ತೀಚೆಗೆ ವಿಡಿಯೋ ಒಂದರಲ್ಲಿ ಮಾತನಾಡಿದ್ದು, ಯಾವಾಗಲೂ ಪ್ರಾಮಾಣಿಕವಾಗಿರಬೇಕು ಎಂದಿದ್ದಾರೆ. 

ಮನಸ್ಸಿನ ಮಾತು 

ನಾನು ಮನಸ್ಸಿನ ಮಾತನ್ನು ಕೇಳುತ್ತೇನೆ. ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ ದೀಪಿಕಾ.

ಉತ್ತರ ಯಾವಾಗ?

ದೀಪಿಕಾ ಪಡುಕೋಣೆ  ಅವರು ಈ ವಿವಾದಕ್ಕೆ ಯಾವಾಗ ಉತ್ತರ ನೀಡುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. 

ಅಲ್ಲು ಸಿನಿಮಾ 

ಅಲ್ಲು ಅರ್ಜುನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಾ ಇದ್ದಾರೆ.