Pic Credit: pinterest
By Malashree Anchan
25 April 2025
ಭಗವದ್ಗೀತೆಯಲ್ಲಿ ನಾವು ಯಾವ ರೀತಿ ಯಶಸ್ವಿ ಜೀವನವನ್ನು ನಡೆಸಬೇಕು, ಸವಾಲುಗಳನ್ನು ಯಾವ ರೀತಿ ಸ್ವೀಕರಿಸಬೇಕು ಎಂಬ ಜೀವನಕ್ಕೆ ಬೇಕಾದ ಅನೇಕ ವಿಚಾರಗಳಿವೆ.
ಸಂಬಂಧಗಳ ಅಡಿಪಾಯವೇ ನಂಬಿಕೆ. ಹಾಗಾಗಿ ನಿಮ್ಮ ಸಂಬಂಧ ಬಲಗೊಳ್ಳಬೇಕಾದರೆ ನಂಬಿಕೆ ಅನ್ನೋದು ತುಂಬಾನೇ ಮುಖ್ಯ.
ಭಗವದ್ಗೀತೆಯಲ್ಲಿ, ನಿಮ್ಮ ಸಂಗಾತಿಗೆ ಅವರ ಇಷ್ಟಾನಿಷ್ಟಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುವಂತೆ ಸಲಹೆ ನೀಡಲಾಗಿದೆ. ಇದು ಬಂಧವನ್ನು ಬಲಪಡಿಸುತ್ತದೆ.
ಸಂಬಂಧದಲ್ಲಿ ಜಗಳಗಳಿಗೆ ನಿರೀಕ್ಷೆಗಳೇ ಕಾರಣ. ಹಾಗಾಗಿ ನೀವು ಯಾರಿಂದಾದರೂ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ.
ಸಂಬಂಧದಲ್ಲಿ ಅಹಂಕಾರದ ಭಾವನೆ ಬಂದರೆ, ಸಂಬಂಧವೂ ಮುರಿದು ಬೀಳುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಯಾವುದೇ ಅಹಂಕಾರ ಭಾವನೆಯನ್ನು ಇಟ್ಟುಕೊಳ್ಳಬೇಡಿ.
ಸಂಗಾತಿಯ ಕಡೆಗೆ ನೀವು ಹೆಚ್ಚು ಉದಾರರಾಗಿದ್ದರೆ, ನಿಮ್ಮ ಜೀವನವು ತುಂಬಾ ಸುಂದರವಾಗಿರುತ್ತದೆ.
ನೀವು ನಿಮ್ಮ ಸಂಬಂಧವನ್ನು, ಸಂಗಾತಿಯನ್ನು ಗೌರವಿಸಿದರೆ ಆ ಪ್ರೀತಿ ಎಂದಿಗೂ ಮುರಿದು ಬೀಳುವುದಿಲ್ಲ.
ಸಂಗಾತಿ ಮತ್ತು ಪ್ರೀತಿಗೆ ಯಾವಾಗಲೂ ನಿಷ್ಠರಾಗಿರಿ. ಈ ಗುಣ ನಿಮ್ಮ ಸಂಬಂಧವನ್ನು ಬಲಪಡಿಸುವುದು ಖಂಡಿತ.