ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ ಅನನ್ಯಾ ಪಾಂಡೆ, ಏನದು?

25 July 2025

By  Manjunatha

ಅನನ್ಯಾ ಪಾಂಡೆ ಬಾಲಿವುಡ್​ನ ಯುವ ಸ್ಟಾರ್ ನಟಿಯರಲ್ಲಿ ಒಬ್ಬರು. ಹಿಟ್ ಇಲ್ಲದಿದ್ದರೂ ಅವಕಾಶಕ್ಕೆ ಕೊರತೆ ಇಲ್ಲ.

    ನಟಿ ಅನನ್ಯಾ ಪಾಂಡೆ

ನಟನೆಗಿಂತಲೂ ಫ್ಯಾಷನ್, ವಿವಾದ, ಹೇಳಿಕೆಗಳಿಂದಲೇ ಅನನ್ಯಾ ಪಾಂಡೆ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಹೆಚ್ಚು ಸುದ್ದಿಯಲ್ಲಿರುತ್ತಾರೆ

ಕರಣ್ ಜೋಹರ್ ಮಾನಸ ಪುತ್ರಿ ಆಗಿರುವ ಅನನ್ಯಾ ಪಾಂಡೆ, ನೆಪೊಟಿಸಮ್ ಕಾರಣದಿಂದ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ.

    ಕರಣ್ ಮಾನಸ ಪುತ್ರಿ

ಇದೀಗ ಅನನ್ಯಾ ಪಾಂಡೆ ಅಪರೂಪಕ್ಕೆ ಸಾಮಾಜಿಕ ಕಾರ್ಯವೊಂದಕ್ಕೆ ಕೈ ಜೋಡಿಸಿದ್ದಾರೆ. ಎನ್​ಜಿಓ ಒಂದರ ಜೊತೆ ಕೈಜೋಡಿಸಿದ್ದಾರೆ.

  ಎನ್​ಜಿಓ ಒಂದರ ಜೊತೆ

ಮಕ್ಕಳಲ್ಲಿ ಎಳವೆಯಿಂದಲೇ ಮಾನವೀಯತೆ ಬೆಳೆಸುವ ಕಾರ್ಯಕ್ರಮ ಒಂದನ್ನು ಎನ್​ಜಿಓ ಹಮ್ಮಿಕೊಂಡಿದ್ದು ಅನನ್ಯಾ ಅದರ ರಾಯಭಾರಿ.

 ಮಾನವೀಯತೆ ಬೆಳೆಸುವ

ಸ್ಲಾಮ್ಸ್ ಔಟ್ ಲೌಡ್ ಹೆಸರಿನ ಎನ್​ಜಿಓ ಜೊತೆಗೆ ಅನನ್ಯಾ ಪಾಂಡೆ ಕೈ ಜೋಡಿಸಿದ್ದು, ಮಕ್ಕಳಿಗೆ ಮಾನವೀಯತೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.

      ಸ್ಲಾಮ್ಸ್ ಔಟ್ ಲೌಡ್

ಮಾನವೀಯತೆ ಬೆಳೆಸುವ ಕುರಿತು ಪಠ್ಯವನ್ನು ಸ್ಲಾಮ್ಸ್ ಔಟ್ ಲೌಡ್ ಪ್ರಾರಂಭಿಸಿದ್ದು, ಅನನ್ಯಾ ಸಹ ಇವರ ಜೊತೆಗೂಡಿದ್ದಾರೆ.

     ಅನನ್ಯಾ ರಾಯಭಾರಿ

ಅನನ್ಯಾ ಪಾಂಡೆ ಸಹ ಈ ಕಾರ್ಯಕ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರಂತೆ. ದೇಶದೆಲ್ಲಡೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆಯಂತೆ.

 ದೇಶದೆಲ್ಲಡೆ ಕಾರ್ಯಕ್ರಮ