Pic credit - Instagram

Author: Rajesh Duggumane

23 May 2025

ತಂದೆಗೇ ಸುಪಾರಿ:  ಆರೋಪಕ್ಕೆ ತಮ್ಮದೇ ಸ್ಟೈಲ್​ನಲ್ಲಿ ಚೈತ್ರಾ ಉತ್ತರ

ಗಂಭೀರ ಆರೋಪ 

ಚೈತ್ರಾ ಕುಂದಾಪುರ ಮೇಲೆ ಈಗ ಗಂಭೀರ ಆರೋಪ ಒಂದು ಕೇಳಿ ಬಂದಿದ್ದು, ಶಾಕಿಂಗ್ ಎನಿಸಿದೆ. 

ಸುಪಾರಿ ಕೊಟ್ರಾ?

ತಂದೆ ಬಾಲಕೃಷ್ಣ ನಾಯಕ್ ಅವರನ್ನು ಮುಗಿಸಲು ಸುಪಾರಿ ಕೊಟ್ಟ ಆರೋಪ ಅವರ ಮೇಲೆ ಇದೆ. 

ದೂರು ದಾಖಲು 

ಬಾಲಕೃಷ್ಣ ಅವರು ಇದಕ್ಕೆ ಸಂಬಂಧಿಸಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 

ಆಸ್ತಿಗಾಗಿ

ತನ್ನ ಆಸ್ತಿಗಾಗಿ ಮಗಳು ಕೊಲೆ ಮಾಡುವ ಮಟ್ಟಕ್ಕೂ ಹೋಗುತ್ತಾಳೆ ಎಂದು ಚೈತ್ರಾ ಬಗ್ಗೆ ಬಾಲಕೃಷ್ಣ ಆರೋಪಿಸಿದ್ದಾರೆ. 

ಚೈತ್ರಾ ತಿರುಗೇಟು 

ಚೈತ್ರಾ ಕುಂದಾಪುರ ಅವರು ಇದಕ್ಕೆ ತಿರುಗೇಟು ಕೊಟ್ಟಿದ್ದಾರೆ. ಅಡಿಕೆ ಹಿಡಿದು  ಅವರು ಫೋಟೋ ಪೋಸ್ಟ್ ಮಾಡಿದ್ದಾರೆ. 

ಕ್ಯಾಪ್ಶನ್ ವೈರಲ್ 

ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು ಇದಕ್ಕೆ ಹಿಂದಿಯಲ್ಲಿ ‘ಸುಪಾರಿ’ ಅಂತಾರೆ. ತುಳುವಿನಲ್ಲಿ ಏನಂತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ತಂದೆಗೆ ಹೇಳಿದ್ದು 

ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. 

ವಿವಾಹ 

ಇತ್ತೀಚೆಗೆ ಚೈತ್ರಾ ಅವರು ವಿವಾಹದ ಆದರು. ಶ್ರೀಕಾಂತ್ ಹೆಸರಿನ ವ್ಯಕ್ತಿ ಜೊತೆ ಅವರ ಮದುವೆ ನಡೆದಿದೆ.