ಮತ್ತೆ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ, ಖಾತ್ರಿಯಾಯ್ತು ಸುದ್ದಿ

07 May 2025

By  Manjunatha

ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ನಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಬಾಲಿವುಡ್​ ಸಿನಿಮಾಗಳಿಗೋಸ್ಕರ ಅವರು ತೆಲುಗು ಸಿನಿಮಾಗಳನ್ನು ನಿರಾಕರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

      ಸಿನಿಮಾ ನಿರಾಕರಣೆ

ಆದರೆ ಈಗ ಹೊರಬಿದ್ದಿರುವ ಹೊಸ ಸುದ್ದಿಯಂತೆ ರಶ್ಮಿಕಾ ಹೊಸ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ ಅದು ತಮ್ಮ ಪ್ರಯತಮನಿಗಾಗಿ!

ಸಿನಿಮಾ ಒಪ್ಪಿಕೊಂಡಿದ್ದಾರೆ

ವಿಜಯ್ ದೇವರಕೊಂಡ ನಟಿಸಲಿರುವ ಹೊಸ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರೇ ನಾಯಕಿ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ನಾಯಕಿ

ವಿಜಯ್ ದೇವರಕೊಂಡ ನಟನೆಯ ಅವರ 14ನೇ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವುದು ಖಾತ್ರಿ ಅಂತೆ.

   ವಿಜಯ್ ದೇವರಕೊಂಡ

ವಿಜಯ್ ಅವರ 14ನೇ ಸಿನಿಮಾವನ್ನು ರಾಹುಲ್ ಸಾಂಕೃತ್ಯಾಯನ ಅವರು ನಿರ್ದೇಶನ ಮಾಡಲಿದ್ದಾರೆ. ಇದೊಂದು ಪ್ರೇಮಕತಾ ಸಿನಿಮಾ.

   ನಿರ್ದೇಶನ ಯಾರದ್ದು?

ಈ ಹಿಂದೆ ರಾಹುಲ್ ಸಾಂಕೃತ್ಯಾಯನ ಅವರು ‘ಟ್ಯಾಕ್ಸಿವಾಲಾ’, ‘ಶ್ಯಾಮ ಸಿಂಘ ರಾಯ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

     ಶ್ಯಾಮ ಸಿಂಘ ರಾಯ್

ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಜೂನ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.

 ಮೈತ್ರಿ ಮೂವಿ ಮೇಕರ್ಸ್