Pic Credit: gettyimages
By Preeti Bhat
07 May 2025
ಸಾಮಾನ್ಯವಾಗಿ ಕಣ್ಣು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದರೆ ಅದರ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ.
ದೇಹದಲ್ಲಿ ನಂಜಿನ ಅಂಶ ಅಥವಾ ಕೆಟ್ಟ ರಕ್ತ ಹೆಚ್ಚಾದಾಗಲೂ ಕೂಡ ಕೆಲವರಿಗೆ ಕಣ್ಣಿನಲ್ಲಿ ಕೀವು ತುಂಬಿಕೊಂಡು ವಿಪರೀತ ನೋವು, ಉರಿ ಉಂಟಾಗುತ್ತದೆ ಇದನ್ನೇ ಕುರು ಎನ್ನುತ್ತಾರೆ.
ಈ ರೀತಿಯ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುವುದಕ್ಕೆ ನಾವು ನಾನಾ ರೀತಿಯ ಪರಿಹಾರ ಮಾರ್ಗಗಳನ್ನು ಹುಡುಕುತ್ತೇವೆ.
ಆದರೆ ಇದಾವುದನ್ನು ಮಾಡದೆಯೇ ಸರಳವಾಗಿ ಕಣ್ಣು ಬೇನೆ ತಡೆಯಲು ಬಾಣಂತಿಯರ ಎದೆ ಹಾಲನ್ನು ಬಳಸಿಕೊಳ್ಳಬಹುದು.
ಬಾಣಂತಿಯರ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ. ಆದರೆ ಇದು ಮಗುವಿಗೆ ಮಾತ್ರವಲ್ಲ ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬಳಕೆ ಮಾಡಲಾಗುತ್ತದೆ.
ಇದರಲ್ಲಿರುವ ಔಷಧೀಯ ಗುಣ ಕಣ್ಣಿನ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ.
ಕಣ್ಣಿನಲ್ಲಿ ಕುರು ಆದಾಗ, ಮರದ ವಿಷಕಾರಿ ಸೊನೆ ಬಿದ್ದಾಗ ತಕ್ಷಣ ತಾಯಿಯ ಎದೆ ಹಾಲನ್ನು ಹನಿ ಹನಿಯಾಗಿ ಕಣ್ಣಿಗೆ ಬಿಡುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಸುಮಾರು ಐದು ಅಥವಾ ಆರು ಹನಿಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಇದನ್ನು ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.