Pic Credit: gettyimages
By Preeti Bhat
07 May 2025
ಹಿಂದಿನಿಂದಲೂ ನಮ್ಮ ಭಾರತೀಯರು ನಾರಿಯರು ಮೈ ಮುಚ್ಚುವಂತೆ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಗೆ ಕುಂಕುಮು, ಮೂಗುತಿ ಮತ್ತು ಕಿವಿಯೊಲೆಗಳನ್ನು ಧರಿಸುತ್ತಾರೆ.
ಇವುಗಳನ್ನು ಧರಿಸುವುದು ಅಂದ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಇದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿವೆ.
ಮಹಿಳೆಯರು ಹಣೆಗೆ ಸಿಂಧೂರವನ್ನಿಟ್ಟರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಸಾಂಪ್ರದಾಯಿಕವಾಗಿ ತಯಾರಾಗುವ ಕುಂಕುಮದಲ್ಲಿ ಅರಶಿನ, ಲಿಂಬೆ, ಚಂದನ ಇನ್ನಿತರ ಆರೋಗ್ಯಕರ ಪದಾರ್ಥಗಳ ಮಿಶ್ರಣ ಮಾಡಲಾಗುತ್ತದೆ.
ಅರಿಶಿನದಲ್ಲಿ ಇರುವ ಕರ್ಕ್ಯೂಮಿನ್ ಅಂಶವು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಅರಿಶಿನ ಮತ್ತು ನಿಂಬೆ ಪರಿಮಳ ಒಟ್ಟಾದಾಗ ಇದು ನಮ್ಮ ಒತ್ತಡ ಕಡಿಮ ಮಾಡಿ ಆತಂಕ, ಖಿನ್ನತೆ ನಿವಾರಣೆ ಮಾಡುತ್ತದೆ.
ಸಿಂಧೂರ ಹಚ್ಚಿಕೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ನಕಾರತ್ಮಕ ಆಲೋಚನೆಗಳು ಬರುವುದಿಲ್ಲ.
ಸಿಂಧೂರ ಹಚ್ಚಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಬೇರೆ ಬೇರೆ ಕೆಟ್ಟ ಆಲೋಚನೆಗಳು ಬರುವುದು ಕಡಿಮೆಯಾಗುತ್ತದೆ.