ಸಿಂಧೂರದಲ್ಲಿ ಅಡಗಿದೆ ಆರೋಗ್ಯ ಪ್ರಯೋಜನ

Pic Credit: gettyimages

By Preeti Bhat

07 May 2025

ಹಣೆಗೆ ಕುಂಕುಮು

ಹಿಂದಿನಿಂದಲೂ ನಮ್ಮ ಭಾರತೀಯರು ನಾರಿಯರು ಮೈ ಮುಚ್ಚುವಂತೆ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಗೆ ಕುಂಕುಮು, ಮೂಗುತಿ ಮತ್ತು ಕಿವಿಯೊಲೆಗಳನ್ನು ಧರಿಸುತ್ತಾರೆ.

ವೈಜ್ಞಾನಿಕ ಕಾರಣ

ಇವುಗಳನ್ನು ಧರಿಸುವುದು ಅಂದ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಇದರ ಹಿಂದೆ ಹಲವಾರು ವೈಜ್ಞಾನಿಕ ಕಾರಣಗಳಿವೆ.

ದೈಹಿಕ, ಮಾನಸಿಕ ಆರೋಗ್ಯ

ಮಹಿಳೆಯರು ಹಣೆಗೆ ಸಿಂಧೂರವನ್ನಿಟ್ಟರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ.

ಕುಂಕುಮದ ತಯಾರಿ

ಸಾಂಪ್ರದಾಯಿಕವಾಗಿ ತಯಾರಾಗುವ ಕುಂಕುಮದಲ್ಲಿ ಅರಶಿನ, ಲಿಂಬೆ, ಚಂದನ ಇನ್ನಿತರ ಆರೋಗ್ಯಕರ ಪದಾರ್ಥಗಳ ಮಿಶ್ರಣ ಮಾಡಲಾಗುತ್ತದೆ.

 ನೆನಪಿನ ಶಕ್ತಿ

ಅರಿಶಿನದಲ್ಲಿ ಇರುವ ಕರ್ಕ್ಯೂಮಿನ್ ಅಂಶವು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಖಿನ್ನತೆ ನಿವಾರಣೆ

ಅರಿಶಿನ ಮತ್ತು ನಿಂಬೆ ಪರಿಮಳ ಒಟ್ಟಾದಾಗ ಇದು ನಮ್ಮ ಒತ್ತಡ ಕಡಿಮ ಮಾಡಿ ಆತಂಕ, ಖಿನ್ನತೆ ನಿವಾರಣೆ ಮಾಡುತ್ತದೆ.

 ಧನಾತ್ಮಕ ಶಕ್ತಿ

ಸಿಂಧೂರ ಹಚ್ಚಿಕೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ನಕಾರತ್ಮಕ ಆಲೋಚನೆಗಳು ಬರುವುದಿಲ್ಲ.

ಕೆಟ್ಟ ಆಲೋಚನೆ

ಸಿಂಧೂರ ಹಚ್ಚಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಬೇರೆ ಬೇರೆ ಕೆಟ್ಟ ಆಲೋಚನೆಗಳು ಬರುವುದು ಕಡಿಮೆಯಾಗುತ್ತದೆ.