Gubbi Assembly Election Results 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್ಡಿ ದಿಲೀಪ್ ಕುಮಾರ್, ಕಾಂಗ್ರೆಸ್ನಿಂದ ಎಸ್ಆರ್ ಶ್ರೀನಿವಾಸ್ ಹಾಗೂ ಜೆಡಿಎಸ್ನಿಂದ ನಾಗರಾಜ ಕಣದಲ್ಲಿದ್ದಾರೆ. ಇವರ ಜೊತೆ ಆಮ್ ಆದ್ಮಿ ಪಕ್ಷದ ಪ್ರಭುಸ್ವಾಮಿ ಅವರೂ ಹೋರಾಟ ನಡೆಸುತ್ತಿದ್ದಾರೆ.
ಗುಬ್ಬಿ ಕ್ಷೇತ್ರದ ಜನರು 1957ರಿಂದ 2018ರ ವರೆಗೆ ಒಟ್ಟು ನಾಲ್ಕು ಬಾರಿ ಪಕ್ಷೇತರ ಅಭ್ಯರ್ಥಿಗಳನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದರು. 2004ರಲ್ಲಿ ಪಕ್ಷೇರತವಾಗಿ ಸ್ಪರ್ಧಿಸಿದ್ದ ಎಸ್ಆರ್ ಶ್ರೀನಿವಾಸ್ ಅವರು ಜೆಡಿಎಸ್ ವಿರುದ್ಧ ಭರ್ಜರಿ ಜಗಳಿಸಿ ನಂತರದ ಮೂರು ಚುನಾವಣೆಗಳನ್ನು ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ 2008ರ ಚುನಾವಣೆ ನಂತರ ಬಿಜೆಪಿ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡುತ್ತಿದೆ.
2004ರಲ್ಲಿ ಪಕ್ಷೇತರವಾಗಿ ಗೆದ್ದಿದ್ದ ಶ್ರೀನಿವಾಸ್ 2008ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಬಿಜೆಪಿಯ ಚಿವಿ ಮಹದೇವಯ್ಯ ಅವರ ವಿರುದ್ಧ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಜಿಎನ್ ಬೆಟ್ಟಸ್ವಾಮಿ ಅವರನ್ನು ಶ್ರೀನಿವಾಸ್ ಅವರು ಸೋಲಿಸಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೆಟ್ಟಸ್ವಾಮಿ ಅವರನ್ನು ಶ್ರೀನಿವಾಸ್ ಅವರು 9081 ಮತಗಳ ಅಂತರದಲ್ಲಿ ಸೋಲಿಸಿದ್ದರು.