ವಿಧಾನಸೌಧದ ಎಂಟ್ರಿಯಲ್ಲೇ ಅಚಾನಕ್ ಆಗಿ ಬಿದ್ದು ಒಡೆದ ಎಣ್ಣೆ ಬಾಟಲ್, ಆ ವ್ಯಕ್ತಿ ಯಾರಿಗಾಗಿ ತಂದಿದ್ದ ಎಣ್ಣೆ?

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಮದ್ಯ ಮದ್ಯ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ, ಅಚಾನಕ್ ಆಗಿ ಮದ್ಯದ ಬಾಟಲಿಯನ್ನು ಕೈಬಿಟ್ಟಿದ್ದು ಅದು ಕೆಳಗೆ ಬಿದ್ದು ಒಡೆದಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶಕ್ತಿ ಸೌಧದಲ್ಲಿ(Vidhana Soudha) ಮದ್ಯ ಬಾಟಲಿ(Liquor Bottle) ಪತ್ತೆಯಾಗಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆ ಹೊಸ್ತಿಲಲ್ಲೇ ವಿಧಾನಸೌಧ ಬಂದಲ್ಲಾ ಬಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಪತ್ತೆಯಾಗಿತ್ತು. ಈಗ ವಿಧಾನಸೌಧದ ದ್ವಾರದಲ್ಲಿ ಎಣ್ಣೆ ಬಾಟಲ್​ಗಳು ಪತ್ತೆಯಾಗಿವೆ.

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಮದ್ಯ ಮದ್ಯ ತೆಗೆದುಕೊಂಡು ಹೋಗ್ತಿದ್ದ ವ್ಯಕ್ತಿ, ಅಚಾನಕ್ ಆಗಿ ಮದ್ಯದ ಬಾಟಲಿಯನ್ನು ಕೈಬಿಟ್ಟಿದ್ದು ಅದು ಕೆಳಗೆ ಬಿದ್ದು ಒಡೆದಿದೆ. ಮದ್ಯದ ಬಾಟಲಿ ಕೆಳಗೆ ಬೀಳುತ್ತಿದ್ದಂತೆ ಎಣ್ಣೆ ಸರಬರಾಜು ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಭದ್ರತಾ ಸಿಬ್ಬಂದಿ ಇದ್ರೂ ಮದ್ಯದ ಬಾಟಲಿ ವಿಧಾನಸೌಧದ ಬಳಗೆ ಬಂದದ್ದು ಹೇಗೆ? ಯಾರಿಗಾಗಿ ಆ ವ್ಯಕ್ತಿ ಮದ್ಯ ತರುತ್ತಿದ್ದ ಎಂಬ ಪ್ರಶ್ನೆ ಎದ್ದಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:24 pm, Tue, 7 March 23

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us