AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ab Meri Baari

Ab Meri Baari

ಅಬ್ ಮೇರಿ ಬಾರಿ” ಎಂಬುದು ಹೊಸ ಟಾಟಾ ಏಸ್ ಪ್ರೊ ಶ್ರೇಣಿಯ ಚೊಚ್ಚಲ ಪ್ರವೇಶವನ್ನು ಗುರುತಿಸಲು ಪ್ರಾರಂಭಿಸಲಾದ ಒಂದು ಪರಿವರ್ತನಾ ಅಭಿಯಾನವಾಗಿದೆ. ಇದು ಕೇವಲ ಸಾರಿಗೆಯ ವಾಹನವಾಗಿರದೇ, ಮಹತ್ವಾಕಾಂಕ್ಷೆ, ಪ್ರಗತಿಯ ವಾಹನವಾಗಿದೆ. ಇದು ಉತ್ಪನ್ನಗಳ ಪರಿಚಯದೊಂದಿಗೆ ತಳಮಟ್ಟದ ಉದ್ಯಮಶೀಲತಾ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ರಾಷ್ಟ್ರೀಯ ಚಳುವಳಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಆತ್ಮವಿಶ್ವಾಸ, ಸ್ವಾವಲಂಬಿ ಭಾರತದ ಮೂಲಾಧಾರವಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾರತವು ತಂತ್ರಜ್ಞಾನ, ಮೂಲಸೌಕರ್ಯ, ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಈ ಅಭಿಯಾನವು ಎಲ್ಲವನ್ನು ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಈ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ತಮ್ಮ ಆಕಾಂಕ್ಷೆಗಳನ್ನು ಉದ್ಯಮವಾಗಿ ಪರಿವರ್ತಿಸಲು ಪ್ರೋತ್ಸಾಹಿಸುತ್ತದೆ. ಇದು ಅನೇಕರಿಗೆ ಸ್ವಾವಲಂಬನೆಯ ಬಗ್ಗೆ ಶಿಕ್ಷಣ ನೀಡುತ್ತಿದೆ ಹಾಗೂ ವೈಯಕ್ತಿಕ ಪ್ರಗತಿಯ ಮೂಲಕ ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಪ್ರೋತ್ಸಾಹಿಸುತ್ತಿದೆ. ಹೊಸ ಟಾಟಾ ಏಸ್ ಪ್ರೊ ಮೂಲತತ್ವವು ಇದಾಗಿದ್ದು, ಗಿಗ್ ಕಾರ್ಮಿಕರು, ತ್ರಿಚಕ್ರ ವಾಹನ ನಿರ್ವಾಹಕರು ಮತ್ತು ಸಣ್ಣ ಪ್ರಮಾಣದ ಸಾಗಣೆದಾರರಿಗೆ ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ. ಮುಂದಿನ ಪೀಳಿಗೆಯ ವಾಹನವನ್ನು ಕೇವಲ ರಸ್ತೆಗಳಲ್ಲಿ ಓಡಾಡಲು ಮಾತ್ರ ನಿರ್ಮಿಸಲಾಗಿಲ್ಲ, ಕನಸುಗಳಿಗಾಗಿ ನಿರ್ಮಿಸಲಾಗಿದೆ, ದೈನಂದಿನ ಉದ್ಯಮಿಗಳನ್ನು ಹೊಸ ಮೈಲಿಗಲ್ಲುಗಳತ್ತ ಮುನ್ನಡೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಬೆಳವಣಿಗೆಯನ್ನು ಚಿತ್ರಿಸುವ ಸಕಾರಾತ್ಮಕ, ನೈಜ-ಪ್ರಪಂಚದ ನಿರೂಪಣೆಗಳ ಸರಣಿಗಳು, ಪ್ರಾದೇಶಿಕ ಉಡಾವಣಾ ಕಾರ್ಯಕ್ರಮಗಳು, ವಿಶೇಷ ಯೋಜನೆಯ ಮೂಲಕ ಉದ್ಯಮಶೀಲತೆ ಕೇವಲ ಆದಾಯದ ಸಾಧನವಲ್ಲ, ಗುರುತು, ಉದ್ದೇಶ ಹಾಗೂ ಪ್ರಗತಿಗೆ ವೇಗವರ್ಧಕವಾಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಈ ಟಾಟಾ ಏಸ್ ಪ್ರೊ ಭಾರತದ ನಿಜವಾದ ನಾಯಕರಾಗಿದ್ದು, ಉದ್ಯಮಿಗಳ ಬೆಳವಣಿಗೆಗೆ ಈ ಅಭಿಯಾನವು ಅನುವು ಮಾಡಿಕೊಡುತ್ತದೆ. ಅಬ್ ಮೇರಿ ಬಾರಿ” ಎಂಬುದು ಕೇವಲ ಅಭಿಯಾನವಲ್ಲ. ಇದೊಂದು ಘೋಷವಾಕ್ಯ. ಭಾರತದಾದ್ಯಂತ ಸಾವಿರಾರು ಜನರ ಸಾಮೂಹಿಕ ಧ್ವನಿ, “ಈಗ, ಇದು ನನ್ನ ಸರದಿ. ಬನ್ನಿ ನಮ್ಮ ಕನಸುಗಳನ್ನು ನನಸಾಗಿಸೋಣ.. ಇದು ಕೇವಲ ಅಭಿಯಾನವಲ್ಲ, ಬದಲಾವಣೆಯ ಆರಂಭ. ಭಾರತದ ಪ್ರತಿಯೊಬ್ಬ ಶ್ರಮಶೀಲ ವ್ಯಕ್ತಿಯು ಸ್ವಾವಲಂಬನೆಯತ್ತ ಹೆಜ್ಜೆ ಹಾಕುವುದರ ಸೂಚನೆಯಾಗಿದೆ..

ಇನ್ನೂ ಹೆಚ್ಚು ಓದಿ

Tata Ace Pro: ಸುರಕ್ಷಿತ ಸಾರಿಗೆಯ ಪ್ರತೀಕವೇ ಟಾಟಾ ಏಸ್‌ ಪ್ರೋ; ಗಿರೀಶ್‌ ವಾಘ್‌

ಮೂಲ ಏಸ್‌ ವಾಹನದ ಪರಂಪರೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ನೂತನ ಟಾಟಾ ಏಸ್‌ ಪ್ರೋ ವಾಹವನ್ನು ಪರಿಚಯಿಸಲು ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ. ಹೊಸ ಪೀಳಿಗೆಯ ಆಕಾಂಕ್ಷೆಗಳನ್ನು ಅಳವಡಿಸಿಕೊಳ್ಳುತ್ತಾ ಏಸ್‌ ಪ್ರೋ ವಾಹನವನ್ನು ಸ್ಥಿರತೆ, ಸುರಕ್ಷತೆ ಮತ್ತು ಗ್ರಾಹಕರ ಹೆಚ್ಚಿನ ಲಾಭಕ್ಕಾಗಿ ನಿರ್ಮಿಸಲಾಗಿದೆ ಎಂದು ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್‌ ವಾಘ್‌ ವಿವರಿಸಿದ್ದಾರೆ.

ಸಣ್ಣ ವ್ಯವಹಾರಗಳಿಗೆ ಸಾರಿಗೆ ಬೆನ್ನೆಲುಬು: ಸಾರಿಗೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್

ಸಾರಿಗೆ ಆಧಾರಿತ ಉದ್ಯಮಶೀಲತೆ ಜೀವನೋಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅನೇಕರು ಸಾರಿಗೆಯನ್ನು ಅವಲಂಬಿಸಿಕೊಂಡು ಯಶಸ್ವಿ ಉದ್ಯಮಿಯಾಗಿದ್ದಾರೆ. ಈ ಸಾರಿಗೆ ಆಧಾರಿತ ಉದ್ಯಮವು ಹೇಗೆ ಜೀವನೋಪಾಯಕ್ಕೆ ಹೇಗೆ ಸಹಕಾರಿಯಾಗಿದೆ ಎನ್ಮುವ ಬಗ್ಗೆ ಕರ್ನಾಟಕ ದಕ್ಷಿಣ ಸಾರಿಗೆ ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ ಮಾಹಿತಿ ಹಂಚಿಕೊಂಡಿದ್ದಾರೆ.

ಟಾಟಾ ಏಸ್‌ನೊಂದಿಗೆ ತ್ರಿಚಕ್ರ ವಾಹನ ನಿರ್ವಾಹಕರ ಆದಾಯದಲ್ಲಿ ಹೆಚ್ಚಳ: ಈ ಬಗ್ಗೆ ಅಶೋಕ್ ಗೋಯಲ್ ಏನ್ ಹೇಳ್ತಾರೆ?

ಟಾಟಾ ಏಸ್‌ನೊಂದಿಗೆ ತ್ರಿಚಕ್ರ ವಾಹನ ನಿರ್ವಾಹಕರು ಗಿಗ್ ಗಳಿಕೆಯನ್ನು ಮೀರಿ ಸ್ಥಿರ, ಆದಾಯವುಳ್ಳ ವ್ಯವಹಾರಗಳತ್ತ ಸಾಗುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ಇದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಟಾಟಾ ಏಸ್ ಅನೇಕರ ಬದುಕಿಗೆ ದಾರಿ ದೀಪವಾಗಿದೆ. ಬಗ್ಗೆ ಅಶೋಕ್ ಗೋಯಲ್ ವಿವರಿಸಿದ್ದಾರೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

ಯುವಕರು, ಮಹಿಳೆಯರ ಸಬಲೀಕರಣಕ್ಕೆ ಟಾಟಾ ಏಸ್ ಪ್ರೊ ಸಾಥ್;‌ ಪ್ರೊ. ಅಮಿತಾಭ್ ಕುಂಡು

ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಮತ್ತು ಸಣ್ಣ ವ್ಯಾಪಾರಿ, ಉದ್ಯಮಿಗಳಿಗೆ ಟಾಟಾ ಏಸ್ ಪ್ರೊ ತುಂಬಾ ಉಪಯುಕ್ತವಾಗಲಿದೆ. ಇದು ಅವರ ಆರ್ಥಿಕತೆಗೆ ಸಹಾಯ ಮಾಡುವುದು ಮಾತ್ರವಲ್ಲದೆ, ಅವರಿಗೆ ಮನ್ನಣೆ ಮತ್ತು ಗೌರವವನ್ನು ಕೂಡ ಒದಗಿಸುತ್ತದೆ ಎಂದು ಪ್ರೊ. ಅಮಿತಾಬ್‌ ಕುಂಡು ವಿವರಿಸಿದ್ದಾರೆ.

ಟಾಟಾ ಏಸ್ ಪ್ರೊ ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಕಾರಿ: ಡಾ. ಎಸ್.ಪಿ ಶರ್ಮಾ

ಟಾಟಾ ಏಸ್‌ ಪ್ರೊ ಕೇವಲ ವ್ಯಾಪಾರ ಸಾಧನವಲ್ಲ, ಇದು ಒಂದು ಕುಟುಂಬದ ಆಸ್ತಿಯಾಗಿದ್ದು, ಇದು ಆ ಕುಟುಂಬದ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಈ ಮೂಲಕ ಕುಟುಂಬದ ಹಾಗೂ ದೇಶದ ಆದಾಯವು ವೇಗವಾಗಿ ಮುನ್ನಡೆಯುತ್ತದೆ. ಅದು ಹೇಗೆ ಎಂಬುದನ್ನು ನಿಯೋ ಎಕನಾಮಿಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್ ಪಿ ಶರ್ಮಾ ವಿವರಿಸಿದ್ದಾರೆ.

ಡಿಜಿಟಲ್‌ ಹಣಕಾಸಿನೊಂದಿಗೆ ಟಾಟಾ ಏಸ್‌ ಪ್ರೋ ಭಾರತದ ನವ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ: ಡಾ. ಜಯಜಿತ್‌ ಭಟ್ಟಾಚಾರ್ಯ

ಟಾಟಾ ಏಸ್‌ ಪ್ರೊ ಮತ್ತು ಸುಲಭ ಸಾಲ ಆಯ್ಕೆಗಳು ಭಾರತದಲ್ಲಿ ನವ ಉದ್ಯಮಿಗಳ ಪಾಲಿಗೆ ಬೆಳಕಾಗಿದೆ. ಈಗಿನ ಡಿಜಿಟಲ್‌ ಮತ್ತು ಸಲುಭ ಸಾಲ ನೀತಿಗಳು ಸಣ್ಣ ಉದ್ಯಮಿಗಳಿಗೆ ಅವಕಾಶವನ್ನು ಸೃಷ್ಟಿಸುತ್ತಿದೆ. ಗಿಗ್‌ ವರ್ಕರ್ಸ್ ಮತ್ತು ಸಣ್ಣ ವ್ಯಾಪಾರಿಗಳು ಸುಲಭ ಸಾಲಗಳನ್ನು ತೆಗೆದುಕೊಂಡು ತಮ್ಮ ವ್ಯವಹಾರಗಳನ್ನು ಬೆಳೆಸುತ್ತಿದ್ದಾರೆ ಎಂದು ಡಾ. ಜಯಜಿತ್‌ ಭಟ್ಟಾಚಾರ್ಯ ಹೇಳಿದರು.

ಸಂತೋಷ್ ಕಾಶಿದ್ ಅವರ ಯಶಸ್ವಿ ಉದ್ಯಮದ ಹಿಂದಿದೆ ಈ ಟಾಟಾ ಏಸ್ ಕೊಡುಗೆ

ಮಗನಾಗಿ ತನ್ನ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರಿಂದ ಹಿಡಿದು ಯಶಸ್ವಿ ಲಾಜಿಸ್ಟಿಕ್ಸ್ ಉದ್ಯಮಿಯಾಗಿ ಹೊರಹೊಮ್ಮುವವರೆಗೆ ಸಂತೋಷ್ ಕಾಶಿದ್ ಅವರ ಪಯಣದಲ್ಲಿ ದೃಢನಿಶ್ಚಯ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆ ಹೇಗಿತ್ತು ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಈ ವ್ಯವಹಾರ ವಿಸ್ತರಣೆಗೆ ಕೈ ಜೋಡಿಸಿದ್ದು ಟಾಟಾ ಏಸ್. ಇದು ಬೆಳವಣಿಗೆಯನ್ನು ಉತ್ತೇಜಿಸಿ, ವಿಶ್ವಾಸಾರ್ಹ ಪಾಲುದಾರನಾಗಿ ಜೊತೆಗೆ ನಿಂತಿದೆ.

ಕಾರ್ಮಿಕರು ಉದ್ಯಮಿಗಳಾಗುವ ಕನಸಿಗೆ ಕೈಜೋಡಿಸುತ್ತಿದೆ ಏಸ್ ಪ್ರೊ: ಪ್ರೊಫೆಸರ್ ಅರುಣ್ ಕುಮಾರ್

ಅರ್ಥಶಾಸ್ತ್ರಜ್ಞ ಮತ್ತು ಜೆಎನ್‌ಯು ಮಾಜಿ ಪ್ರಾಧ್ಯಾಪಕ ಪ್ರೊಫೆಸರ್‌ ಅರುಣ್ ಕುಮಾರ್ ಭಾರತದ ವಿಕಸನಗೊಳ್ಳುತ್ತಿರುವ ಕಾರ್ಮಿಕವರ್ಗವು ಮಾಲೀಕರಾಗಿ ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸಿದ್ದಾರೆ. ಇಲ್ಲಿ ಕಾರ್ಮಿಕರು ಮಾಲೀಕರಾಗಿ ಬೆಳೆಯುತ್ತಿದ್ದಾರೆ. ಈ ಬದಲಾವಣೆಯ ಹಿಂದೆ ಏಸ್ ಪ್ರೊ ಕೊಡುಗೆ ಅಗಾಧವಾಗಿದೆ. ಇದು ವ್ಯಕ್ತಿಗಳು ಸ್ಥಿರ ಆದಾಯದೊಂದಿಗೆ ಉದ್ಯಮಶೀಲತೆಯೆಡೆಗೆ ಮುಖ ಮಾಡಲು ಸಹಾಯ ಮಾಡುತ್ತದೆ ಎನ್ನುವುದನ್ನು ತಿಳಿಸಿದ್ದಾರೆ. ಈ ಕುರಿತಾದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ವಿಭಿನ್ನ ದೃಷ್ಟಿಕೋನದಿಂದ ಯಶಸ್ಸಿನತ್ತ: ಜಿಬನ್ ಕುಮಾರ್ ಅವರ ವೇಸ್ಟ್ ಮ್ಯಾನೇಜ್‌ಮೆಂಟ್‌ ಬ್ಯುಸಿನೆಸ್‌ಗೆ ಸಾಥ್ ಕೊಟ್ಟ ಟಾಟಾ ಏಸ್‌

ಜೆಎಸ್ ಎನ್ವಿರೋ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ಜಿಬನ್ ಕುಮಾರ್ ಉಪಾಧ್ಯಾಯ ನಿರಂತರತೆ ಮತ್ತು ಟಾಟಾ ಏಸ್‌ನಿಂದ ಯಶಸ್ವಿ ತ್ಯಾಜ್ಯ ನಿರ್ವಹಣಾ ವ್ಯವಹಾರವಾಗಿ ಪರಿವರ್ತಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರ ಯಶಸ್ಸಿಗೆ ಟಾಟಾ ಏಸ್‌ನ ಹೇಗೆ ಕೈ ಜೋಡಿಸಿತು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ರಟ್ಟಿನ ಬಾಕ್ಸ್ ತಯಾರಿಸುತ್ತಿದ್ದ ಹಸನ್ ಮೊಹಮ್ಮದ್ ಸರ್ದಾರ್ ಇಂದು ಯಶಸ್ವಿ ಉದ್ಯಮಿ, ಇವರು ಬೆಳೆದು ಬಂದ ಹಾದಿ ಹೇಗಿತ್ತು?

ಕೈಯಲ್ಲೇ ರಟ್ಟಿನ ಬಾಕ್ಸ್ ತಯಾರಿಕೆಯಿಂದ ಹಿಡಿದು, ಪೂರ್ಣ ಪ್ರಮಾಣದಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ಉದ್ಯಮಕ್ಕೆ ಕೈ ಹಾಕಿ ಯಶಸ್ಸು ಕಂಡವರು ಪಶ್ಚಿಮ ಬಂಗಾಳದ ಡೊಮ್ಜೂರಿನ ಹಸನ್ ಮೊಹಮ್ಮದ್ ಸರ್ದಾರ್. ಇವರ ಸಾಧನೆ ಹಾದಿ ಎಲ್ಲರಿಗೂ ಸ್ಫೂರ್ತಿ, ಇವರ ದಿಟ್ಟ ಹೆಜ್ಜೆಗೆ ಟಾಟಾ ಏಸ್ ಜೊತೆಯಾಗಿತ್ತು. ಈ ಇವರ ಯಶಸ್ಸಿನ ಸ್ಟೋರಿ ಇಲ್ಲಿದೆ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ